ಕುಕ್ಕಾಜೆ: ಶಂಸುಲ್ ಉಲಮಾ ಕ್ರಿಯಾ ಸಮಿತಿಯಿಂದ ಇಫ್ತಾರ್ ಕೂಟ

Update: 2017-06-10 09:01 GMT

ಬಂಟ್ವಾಳ, ಜೂ.10: ಶಂಸುಲ್ ಉಲಮಾ ಕ್ರಿಯಾ ಸಮಿತಿ ಕುಕ್ಕಾಜೆ ವತಿಯಿಂದ ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆ ವಠಾರದಲ್ಲಿ ಸಮಿತಿಯ ಅಧ್ಯಕ್ಷ ಅಬೂಬಕರ್ ಟಿ. ಅಧ್ಯಕ್ಷತೆಯಲ್ಲಿ ಇಫ್ತಾರ್ ಕೂಟ ನಡೆಯಿತು. 
 
ಈ ಸಂದರ್ಭದಲ್ಲಿ ಹುಸೈನ್ ಬಾಲವಿ ತಂಙಳ್ ಕುಕ್ಕಾಜೆ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಶರಫುಲ್ ಇಸ್ಮಾಂ ಕಮಿಟಿ ಅಧ್ಯಕ್ಷ ಹಂಝ ಕುರಿಯಪ್ಪಾಡಿ, ಮುಹಿಯುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ರಫೀಖ್, ಖಜಾಂಜಿ ಹಸೈನಾರ್, ಶಂಸುಲ್ ಉಲಮಾ ಕ್ರಿಯಾ ಸಮಿತಿ  ಮಾಜಿ ಅಧ್ಯಕ್ಷ ಮೊಯ್ದಿನಬ್ಬ,  ಕಾರ್ಯದರ್ಶಿ ಇಝತ್ ಮಹಮ್ಮದ್, ಜತೆ ಕಾರ್ಯದರ್ಶಿ ಹಾರಿಸ್,  ಮಾಜಿ ತಾಲೂಕು ಪಂಚಾಯತ್ ಸದಸ್ಯ ಡಿ.ಕೆ ಹಂಝ, ಅಬೂಸಿರಾಜ್ ಮುಸ್ಲಿಯಾರ್, ಮಂಚಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಉಸ್ಮಾನ್ ಕಲ್ಲಮರೈ, ನೌಫಲ್ ಕುಡ್ತಮುಗೇರು, ಸಾಗರ್ ಲತೀಫ್, ಝೈನುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News