ರಸ್ತೆ ಅಪಘಾತ: ಲಾರಿ ಚಾಲಕ ಮೃತ್ಯು

Update: 2017-06-10 09:42 GMT

ಕಾಸರಗೋಡು, ಜೂ. 10:  ಲಾರಿ - ಬಸ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ತ್ರಿಶೂರಿನಲ್ಲಿ ಶನಿವಾರ ನಡೆದಿದೆ.

ಮೃತರನ್ನು ಕಾಸರಗೋಡು ಬಂದಡ್ಕ ಮೂಲಕಂಡದ ಚಂದ್ರಶೇಖರನ್ ನಾಯರ್ (60)  ಎಂದು ಗುರುತಿಸಲಾಗಿದೆ. ಕ್ಲಿನರ್  ಬಂದಡ್ಕ ಬಳಿಯ ಮಾನಡ್ಕ ನಿವಾಸಿ ಬಿಜು (30) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ತೃಶೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ತ್ರಿಶೂರಿನಿಂದ ಸರಕು ಹೇರಿಕೊಂಡು ಕಾಸರಗೋಡು ಕಡೆಗೆ ಹೋಗುತ್ತಿದ್ದ ಲಾರಿ ಮತ್ತು ವೆಳ್ಳರಿಕುಂಡದಿಂದ  ತ್ರಿಶೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಅಪಘಾತ ನಡೆದಿದೆ.

ಕಾಸರಗೋಡು-ಬಂದಡ್ಕ ರೂಟ್‌ನಲ್ಲಿ ಸಂಚರಿಸುವ ವರದರಾಜ್ ಬಸ್‌ನಲ್ಲಿ ಹಲವು ವರ್ಷಗಳಿಂದ ಚಾಲಕನಾಗಿದ್ದರು. ಚಂದ್ರಶೇಖರನ್ ನಾಯರ್ ಕಳೆದ ನಾಲ್ಕು ವರ್ಷಗಳಿಂದ ಸ್ವಂತ  ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News