ಅಶ್ರಫ್ ಹತ್ಯೆ ಪ್ರಕರಣ: ಪೊಲೀಸರ ಮುಂಜಾಗ್ರತಾ ಕ್ರಮಕ್ಕೆ ಅಡ್ಡಿಪಡಿಸಿದ ಪ್ರಭಾಕರ್ ಭಟ್

Update: 2017-06-21 08:15 GMT

ಬಂಟ್ವಾಳ, ಜೂ.21: ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ, ಕಲಾಯಿ ನಿವಾಸಿ ಅಶ್ರಫ್ ರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ನಂತರ ಕಲ್ಲಡ್ಕದಲ್ಲಿ ಲಾಠಿಚಾರ್ಜ್ ನಡೆದಿದೆ. ಅಶ್ರಫ್ ಹತ್ಯೆಯ ನಂತರ ಕೋಮುಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿದ್ದು, ಈ ಸಂದರ್ಭ ಅಲ್ಲಿಗೆ ಆಗಮಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ತಡೆಯೊಡ್ಡಿದ್ದಾರೆ ಎನ್ನಲಾಗಿದೆ.

"ಯಾರೂ ಅಂಗಡಿ ಮುಚ್ಚಬೇಡಿ" ಎಂದು ಪ್ರಭಾಕರ್ ಭಟ್ ಹಾಗೂ ಅವರ ಜೊತೆಗಿದ್ದವರು ಹೇಳಿದ್ದು, ಅಂಗಡಿಗಳನ್ನು ತೆರೆಯಲು ಮುಂದಾಗಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಪ್ರಭಾಕರ್ ಭಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣವಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News