ಅಝಂ ಖಾನ್ ತಲೆ ಕಡಿಯುವವರಿಗೆ 51 ಲಕ್ಷ ರೂ. ಬಹುಮಾನ: ಬಜರಂಗದಳ

Update: 2017-07-01 13:23 GMT

ಹೊಸದಿಲ್ಲಿ, ಜು.1: ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ತಲೆ ಕಡಿಯುವವರಿಗೆ 51 ಲಕ್ಷ ರೂ. ನೀಡಲಾಗುವುದು ಎಂದು ರಾಂಪುರದ ಬಜರಂಗದಳ ಕಾರ್ಯಕರ್ತರು ಘೋಷಿಸಿದ್ದಾರೆ.

“ಅಝಂ ಖಾನ್ ಮುಖಕ್ಕೆ ಬಳಿಯುವವರಿಗೆ ಹಾಗೂ ಅವರಿಗೆ ಹಂದಿಮಾಂಸ ತಿನ್ನಿಸುವವರಿಗೆ ಒಂದು ಕೋಟಿ ರೂ. ಬಹುಮಾನ ನೀಡಲಾಗುವುದು” ಎಂದು ಬಜರಂಗದಳ ಹೇಳಿದೆ.

“ಒಬ್ಬ ನೈಜ ಮುಸಲ್ಮಾನ ದೇಶದ ವಿರುದ್ಧ ಮಾತನಾಡುವುದಿಲ್ಲ. ಖಾನ್ ರ ಹೇಳಿಕೆಯು ಅವರು ನೈಜ ಮುಸಲ್ಮಾನನಲ್ಲ ಎಂಬುವುದನ್ನು ನಿರೂಪಿಸುತ್ತದೆ. ಆದ್ದರಿಂದ ಅವರ ಡಿಎನ್ ಎ ಪರೀಕ್ಷೆ ನಡೆಸಬೇಕು” ಎಂದು ಬಜರಂಗದಳದ ಪ್ರಾಂತೀಯ ಮುಖ್ಯಸ್ಥ ಸರ್ವೇಶ್ ಗಂಗ್ವಾರ್ ಹೇಳಿದ್ದಾರೆ.

ಇದಕ್ಕೂ ಮೊದಲು ವಿಶ್ವ ಹಿಂದೂ ಪರಿಷತ್ ನ ನಾಯಕರೊಬ್ಬರು ಅಝಂ ಖಾನ್ ನಾಲಗೆ ಕತ್ತರಿಸುವವರಿಗೆ 50 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News