ಸಾಲೆತ್ತೂರು ಪ್ರೌಢಶಾಲೆಯಲ್ಲಿ ಸೈಕಲ್, ಕನ್ನಡಕ ವಿತರಣೆ ಕಾರ್ಯಕ್ರಮ

Update: 2017-07-07 09:56 GMT

ವಿಟ್ಲ, ಜು.7: ಸಾಲೆತ್ತೂರು ಪ್ರೌಢಶಾಲೆಯಲ್ಲಿ 8ನೆ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಜಿ.ಪಂ. ಸದಸ್ಯ ಎಂ.ಎಸ್.ಮುಹಮ್ಮದ್ ಸೈಕಲ್‌ಗಳನ್ನು ವಿತರಿಸಿದರು.

ಉಚಿತ ಕನ್ನಡಕ ವಿತರಣೆ
ಇದೇ ಸಂದರ್ಭ ಇನ್ನೊಂದು ಕಾರ್ಯಕ್ರಮದಲ್ಲಿ ಯೆನೆಪೊಯ ವೈದ್ಯಕೀಯ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗದ ನೆರವಿನಿಂದ ದೃಷ್ಟಿ ದೋಷವಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.

ಈ ಸಂದರ್ಭ ಶಾಲಾ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಮಾಧವ ಮಾವೆ, ಸದಸ್ಯರಾದ ಎ.ಬಿ.ಅಬ್ದುಲ್ಲಾ, ಚಂದ್ರಹಾಸ ಪೂಜಾರಿ, ಸುಬ್ಬಣ್ಣ ನಾಯ್ಕ, ಮುಖ್ಯೋಪಾಧ್ಯಾಯ ರೇವಣ್ಣ , ಸಹ ಶಿಕ್ಷಕರು,ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News