ವೈ.ಎಫ್.ಸಿ. ವತಿಯಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ
Update: 2017-07-18 10:31 GMT
ಮಂಗಳೂರು, ಜು.18: ಯುವ ಮಿತ್ರ ಬಳಗ (ವೈ.ಎಫ್.ಸಿ) ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ಹಾಗೂ ಉಚಿತ ಅರ್ಜಿ ಸಲ್ಲಿಸುವಿಕೆ ಕಾರ್ಯಕ್ರಮವು ಕೊಣಾಜೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಚ್ಚುತ ಗಟ್ಟಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ ಭಾಗವಹಿಸಿದ್ದರು.
ಬಂಟ್ವಾಳ ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ಡಿ.ಒ ಜಾಫರ್ ರಹ್ಮಾನ್ ವಿದ್ಯಾರ್ಥಿವೇತನದ ಕುರಿತು ಮಾಹಿತಿ ನೀಡಿದರು. ವೈ. ಎಫ್. ಸಿ ಯ ಉಪಾಧ್ಯಕ್ಷ ಸಿದ್ದೀಕ್ ವೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.