ಕಮಲ್ ರಾಜಕೀಯ ಪ್ರವೇಶ..?

Update: 2017-07-19 12:24 GMT

ಹೊಸದಿಲ್ಲಿ, ಜು.19: ಈ ಮುಠ್ಠಾಳತನವನ್ನು ಕೊನೆಗೊಳಿಸಲು ಇರುವ ಏಕೈಕ ಮಾರ್ಗವೆಂದರೆ ಇದರ ವಿರುದ್ಧ ಮೊದಲಿಗನಾಗಿ ಹೋರಾಟ ನಡೆಸುವುದು. ಸ್ನೇಹಿತರೇ, ಬನ್ನಿ, ನನ್ನೊಡನೆ ಸೇರಿಕೊಳ್ಳಿ - ಎಂಬ ಸಂದೇಶವನ್ನು ನಟ ಕಮಲಾಹಾಸನ್ ಟ್ವೀಟ್ ಮಾಡುವ ಮೂಲಕ ರಾಜಕೀಯ ಪ್ರವೇಶಿಸುವ ಊಹಾಪೋಹಗಳಿಗೆ ನೀರೆರೆದಿದ್ದಾರೆ.

   ತಮಿಳಿನಲ್ಲಿ ಪ್ರಸಾರವಾಗುತ್ತಿರುವ ‘ಬಿಗ್‌ಬಾಸ್’ ಕಾರ್ಯಕ್ರಮದ ನಿರೂಪಣೆಯ ಸಂದರ್ಭ ಕಮಲ್, ಸರಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳುವ ಮೂಲಕ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು . ಕೆಲವು ಸಚಿವರು ಕಮಲಹಾಸನ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇದಕ್ಕೆ ಪ್ರತ್ಯುತ್ತರ ಎಂಬಂತೆ ಗೂಡಾರ್ಥದ ಹೇಳಿಕೆಯನ್ನು ಕಮಲ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ. ನಾನು ಒಂದು ವೇಳೆ ಸೋತರೂ , ಹೋರಾಡಿ ಸೋಲುತ್ತೇನೆ. ಮಂಡಿಯೂರುವ ಎಲ್ಲರನ್ನೂ ಗುಲಾಮರೆಂದು ಭಾವಿಸಬೇಡಿ. ಮಂಡಿಯೂರುವವರೆಲ್ಲರೂ ಸೋತವರು ಎಂದು ಪರಿಗಣಿಸಲಾಗದು ಎಂಬ ಅರ್ಥ ಬರುವ ಹೇಳಿಕೆಯನ್ನು ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News