ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್‍ ರಿಗೆ ಮಂಗಳೂರಿನಲ್ಲಿ ಸ್ವಾಗತ

Update: 2017-07-24 09:14 GMT

ಮಂಗಳೂರು, ಜು.24: ಕೆಪಿಸಿಸಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ಜಿಲ್ಲೆಗೆ ಪ್ರಥಮ ಬಾರಿ ಆಗಮಿಸುತ್ತಿರುವ ಪಿ.ವಿ. ಮೋಹನ್‍ರನ್ನು ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸ್ವಾಗತಿಸಿದರು. 

ಈ ಸಂದರ್ಭ ಮಾತನಾಡಿದ ಪಿ.ವಿ. ಮೋಹನ್‍, ತನಗೆ ದೊರಕಿದ ಹುದ್ದೆ ಸಮಸ್ತ ಕಾರ್ಯಕರ್ತರಿಗೆ ಸಂದ ಗೌರವವಾಗಿದೆ. ಒಗ್ಗಟ್ಟಿನಿಂದ ದುಡಿದು “ಮತ್ತೆ ಮರಳಿ ಕಾಂಗ್ರೆಸ್ ಅಧಿಕಾರ-ಮಿಷನ್ 2018”ನ್ನು ಯಶಸ್ವಿಗೊಳಿಸಬೇಕಾಗಿದೆ. ಪಕ್ಷದ ಕಾರ್ಯಕರ್ತರು ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಬೇಕಾಗಿದೆ. ಸಾಮರಸ್ಯ, ಸೌಹಾರ್ದಕ್ಕಾಗಿ ಶಾಂತಿಯುತ ಹೋರಾಟವನ್ನು ಮಾಡಬೇಕಾಗಿದೆ. ಬಹುಸಂಖ್ಯಾತರು ಮತ್ತು ಅಲ್ಪ ಸಂಖ್ಯಾತರು ಎಂದು ಒಡೆದು ಆಳುವವರ ಬಣ್ಣ ಬಯಲಾಗಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News