ಜು. 27: ಬಿಎಸ್ಸೆನ್ನೆಲ್ ಉದ್ಯೋಗಿಗಳ ಮುಷ್ಕರ

Update: 2017-07-24 14:53 GMT

ಹೊಸದಿಲ್ಲಿ, ಜು. 24: ಮೂರನೇ ವೇತನ ಪರಿಷ್ಕರಣಾ ಸಮಿತಿ ಶಿಫಾರಸಿನಂತೆ ವೇತನ ಏರಿಕೆ ಮಾಡದ ಹಿನ್ನೆಲೆಯಲ್ಲಿ ಬಿಎಸ್ಸೆನ್ನೆಲ್ ಉದ್ಯೋಗಿಗಳು ಜುಲೈ 27ರಂದು ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಸಾರ್ವಜನಿಕ ವಲಯದ ಸಂಸ್ಥೆಯಾದ ಬಿಎಸ್‌ಎನ್‌ಎಲ್‌ನ ಸಾಮರ್ಥ್ಯದ ಆಧಾರದಲ್ಲಿ ವೇತನ ಏರಿಕೆ ಮಾಡುವಂತೆ ಸಮಿತಿ ಶಿಫಾರಸು ಮಾಡಿತ್ತು. ಮೂರನೇ ವೇತನ ಪರಿಷ್ಕರಣಾ ಸಮಿತಿಯ ಶಿಫಾರಸಿಗೆ ಜುಲೈ 19ರಂದು ಸಂಸತ್ತಿನಲ್ಲಿ ಅಂಗೀಕಾರ ನೀಡಲಾಗಿತ್ತು.

 ಬಿಎಸ್‌ಎನ್‌ಎಲ್‌ಗೆ ನಷ್ಟ ಉಂಟಾಗಲು ಉದ್ಯೋಗಿಗಳು ಕಾರಣ ಅಲ್ಲ. ಸರಕಾರ ತೆಗೆದುಕೊಂಡ ಬಿಎಸ್‌ಎನ್‌ಎಲ್ ವಿರೋಧಿ ನೀತಿ ಹಾಗೂ ಕ್ರಮಗಳು ಕಾರಣ. 2006ರಿಂದ 2012ರ ವರೆಗೆ ಮೊಬೈಲ್ ನೆಟ್‌ವರ್ಕ್ ವಿಸ್ತರಣೆಗೆ ಬೇಕಾದ ಉಪಕರಣಗಳನ್ನು ಹೊಂದಲು ಬಿಎಸ್ಸೆನ್ನೆಲ್‌ಗೆ ಅವಕಾಶ ನೀಡಿಲ್ಲ ಎಂದು ಬಿಎಸ್ಸೆನ್ನೆಲ್ ಉದ್ಯೋಗಿಗಳ ಸಂಘಟನೆಯ ಸಂಚಾಲಕ ಪಿ. ಅಭಿಮನ್ಯು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News