ಕಣ್ಣಿಗೆ ಮೆಣಸಿನ ಪುಡಿ ಎರಚಿ ದರೋಡೆ
Update: 2017-07-25 18:38 GMT
ವೇಣೂರು, ಜು.25: ಬೈಕನ್ನು ಅಡ್ಡಗಟ್ಟಿ ಸವಾರರ ಕಣ್ಣಿಗೆ ಮೆಣಸಿನ ಪುಡಿ ಎರಚಿ 55 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿಯಲ್ಲಿ ನಡೆದಿದೆ.
ಬೆಳ್ತಂಗಡಿಯ ವೈನ್ಶಾಪ್ನಲ್ಲಿ ಕೆಲಸಕ್ಕಿರುವ ಮರೋಡಿ ನಿವಾಸಿಗಳಾದ ಅಜಯ್ ಹಾಗೂ ಗಣೇಶ್ ಎಂಬವರು ಸಂಗ್ರಹವಾದ 55 ಸಾವಿರ ರೂ. ವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಮರೋಡಿ ಪಲಾರಗೋಳಿಯ ಕಲ್ಲಟ ಬಳಿ ತೆರಳುತ್ತಿದ್ದಂತೆ ಹಿಂದಿನಿಂದ ಬಂದ ದುಷ್ಕರ್ಮಿ ಗಳು ಬೈಕ್ ಸವಾರರ ಕಣ್ಣಿಗೆ ಮೆಣಸಿನ ಪುಡಿ ಎರಚಿ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.