ನಾರ್ಶಮೈದಾನ: ವಿದ್ಯಾರ್ಥಿ ಸಂಸತ್ ರಚನೆ

Update: 2017-07-26 05:54 GMT

ವಿಟ್ಲ, ಜು. 26:  ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ನಾರ್ಶಮೈದಾನ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾಲೇಜು ಪ್ರಾಂಶುಪಾಲೆ ಸಿಂಥಿಯಾ ಅವಿಟಾ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಪನ್ಯಾಸಕ ಚನ್ನಪ್ಪ ಉದ್ಘಾಟಿಸಿದರು. ಕಾಲೇಜು ವಿದ್ಯಾರ್ಥಿ ನಾಯಕನಾಗಿ ಉಸೈದ್, ನಾಯಕಿಯಾಗಿ ಫಾತಿಮತ್ ಬುಶ್ರಾ, ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ನೌಶಾದ್ ಕೆ., ಶಿಸ್ತು ಪಾಲನೆ ಮಂತ್ರಿಯಾಗಿ ಮುಹಮ್ಮದ್ ಆಸಿಫ್, ಸ್ವಚ್ಛತಾ ಮಂತ್ರಿಯಾಗಿ ನುಸೈಬಾ, ಆರೋಗ್ಯ ಮಂತ್ರಿಯಾಗಿ ತಸ್ಲೀಮಾ ಎನ್.ಪಿ. ಇವರು ಇದೇ ವೇಳೆ ಪ್ರಮಾಣವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News