ಹಜ್ ಯಾತ್ರೆ: ಬೊಳ್ಳೂರು ಉಸ್ತಾದರಿಗೆ ಬೀಳ್ಕೊಡುಗೆ

Update: 2017-07-28 05:32 GMT

ಮಂಗಳೂರು, ಜು.28: ಬೊಳ್ಳೂರು ಮುಹಿಯುದ್ದೀನ್ ಜುಮಾ ಮಾಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಬೊಳ್ಳೂರು ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಶೈಖುನಾ ಬೊಳ್ಳೂರು ಉಸ್ತಾದರಿಗೆ ಬೀಳ್ಕೊಡುಗೆ ಸಮಾರಂಭವು ಗುರುವಾರ ರಾತ್ರಿ ನಡೆಯಿತು.

ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಬೊಳ್ಳೂರು ಉಸ್ತಾದ್ ದುಆದೊಂದಿಗೆ ಉದ್ಘಾಟಿಸಿದರು.

ಸದರ್ ಮುಅಲ್ಲಿಂ ನಾಸಿರ್ ಮುಸ್ಲಿಯಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಉಸ್ತಾದರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.

 ಬೊಳ್ಳೂರು ಜುಮಾ ಮಸೀದಿಯ ಕಾರ್ಯದರ್ಶಿ ಶೇಖ್ ಅಬ್ದುಲ್ಲಾ ಕಲ್ಲಾಪು, ಜೊತೆ ಕಾರ್ಯದರ್ಶಿ ಬಿ.ಎಂ.ಸುಲೈಮಾನ್, ಉಪಾಧ್ಯಕ್ಷ ಹಾಜಿ ಸುಲೈಮಾನ್ ಕೊಪ್ಪಲ, ಲೆಕ್ಕ ಪರಿಶೋಧಕ ಹಾಜಿ ಐ.ಎ.ಕೆ., ಮಾಜಿ ಅಧ್ಯಕ್ಷ ಹಾಜಿ ಎ.ಕೆ.ಜೀಲಾನಿ, ಹಸನ್ ಮುಸ್ಲಿಯಾರ್, ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ ಅಧ್ಯಕ್ಷ ಬಶೀರ್ ಐ.ಎ.ಕೆ., ಪ್ರಧಾನ ಕಾರ್ಯದರ್ಶಿ ಬಿ.ಎಂ.ರಹ್ಮಾನ್, ಮುಡಾ ಮಂಗಳೂರು ಸದಸ್ಯರಾದ ಎಚ್.ವಸಂತ ಬೆರ್ನಾಡ್, ಹಳೆಯಂಗಡಿ ಗ್ರಾಪಂ ಸದಸ್ಯರಾದ ಎಂ.ಅಬ್ದುಲ್ ಖಾದರ್, ಅಝೀಝ್ ಐ.ಎ.ಕೆ. ಮತ್ತಿತರರು ಅತಿಥಿಗಳಾಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News