​ಮಚ್ಚಂಪಾಡಿ: ಬೀಳ್ಕೊಡುಗೆ ಸಮಾರಂಭ

Update: 2017-07-29 09:32 GMT

ಮಂಜೇಶ್ವರ, ಜು.29: ಮಚ್ಚಂಪಾಡಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಮಚ್ಚಂಪಾಡಿ ಶಾಖೆ ವತಿಯಿಂದ ಮಜ್ಲಿಸುನ್ನೂರ್ ಹಾಗೂ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಯಿತು.

ಸಮಾರಂಭವನ್ನು ಸಯ್ಯಿದ್ ಅಲೀ ತಂಘಳ್ ಕುಂಬೋಳ್ ಉದ್ಘಾಟಿಸಿದರು. ಬಶೀರ್ ಬಾಖವಿ, ಸಿದ್ದೀಕ್ ಅರ್ಹರಿ ಮಜ್ಲಿಸುನ್ನೂರ್ ಗೆ ನೇತೃತ್ವ ನೀಡಿದರು.

ಈ ಬಾರಿ ಮಚ್ಚಂಪಾಡಿ ಪ್ರದೇಶದಿಂದ ಪವಿತ್ರ ಹಜ್ ಗೆ ತೆರಳುವ ಮಚ್ಚಂಪಾಡಿ ಮುಹದ್ದಿನ್ ಮುಹಮ್ಮದ್ ಮುಸ್ಲಿಯಾರ್, ಬಾವಾ, ಮುಹಮ್ಮದ್ ಇಡಿಯಾ, ಕೊಳಿಯೂರು ಮೋನು, ಅಬ್ದುಲ್ ರಹಿಮಾನ್, ಅಬ್ದುಲ್ ರಹಿಮಾನ್ ಕಿಟ್ಟಗುಂಡಿ, ಖಾದರ್, ಹಮೀದ್ ಎಂಬಿವರನ್ನು ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು.

ಈ ಸಂದರ್ಭ ಜಿ.ಸಿ.ಸಿ ಕೆ.ಎಂ.ಸಿ.ಸಿ ಮಚ್ಚಂಪಾಡಿ ಸಮಿತಿಯ ಅಧ್ಯಕ್ಷ ಹುಸೈನ್ ಮಚ್ಚಂಪಾಡಿ , ಪತ್ರಕರ್ತ ಆರಿಫ್ ಮಚ್ಚಂಪಾಡಿ , ಇಸ್ಲಾಮಿಕ್ ಸೆಂಟರ್ ಪದಾಧಿಕಾರಿಗಳಾದ ಅಝೀರ್ ಹಾಜಿ, ಇಸ್ಮಾಯಿಲ್, ಇಬ್ರಾಹಿಂ.ಪಿ.ಪಿ, ಮಚ್ಚಂಪಾಡಿ ಜುಮಾ ಮಸೀದಿ ಅಧ್ಯಕ್ಷ ಹುಸೈನಾರ್.ಪಿ.ಎಚ್ಚ್, ಪಂಚಾಯತ್ ಸದಸ್ಯ ಹಾರಿಸ್, ಯೂಸುಫ್ ಹಾರಿಸ್, ಎಸ್.ಕೆ.ಎಸ್.ಎಸ್.ಎಫ್ ಯುನಿಟ್ ಅಧ್ಯಕ್ಷ ನೌಫಲ್, ಹಸನ್ ದಾರಿಮಿ ಮೊದಲಾದವರು ಉಪಸ್ತಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News