ನರ್ಮದಾ ಬಚಾವೊ ಆಂದೋಲನಕ್ಕೆ ನೋಮ್ ಚಾಮ್‌ಸ್ಕಿ ಬೆಂಬಲ

Update: 2017-08-01 17:57 GMT

ಹೊಸದಿಲ್ಲಿ, ಆ.1: ನರ್ಮದಾ ನದಿ ಕಣಿವೆ ಯೋಜನೆಯಿಂದ ಸಂತ್ರಸ್ತರಿಗೆ ಅಮೆರಿಕದ ಖ್ಯಾತ ಇತಿಹಾಸಕಾರ, ತತ್ವಜ್ಞಾನಿ ನೋಮ್ ಚಾಮ್‌ಸ್ಕಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ನರ್ಮದಾ ಬಚವೋ ಆಂದೋಲನದ ಪ್ರಕಟನೆ ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಸರ್ದಾರ್ ಸರೋವರ್‌ನಿಂದಾಗಿ ಮುಳುಗಡೆ ಭೀತಿ ಎದುರಿಸುತ್ತಿರುವ ಜನರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಧಾನಿ ನರೇಂದ್ರ ಮೋದಿ ಮದ್ಯೆ ಪ್ರವೇಶಿಸುವಂತೆ ಕೋರಿ ಚಾಮ್‌ಸ್ಕಿ ಆನ್‌ಲೈನ್ ದೂರು ಸಲ್ಲಿಸಿದ್ದಾರೆ.

ಮುಳುಗಡೆಯಿಂದ ಭೀತಿ ಎದುರಿಸುತ್ತಿರುವ ಜನರನ್ನು ರಕ್ಷಿಸಲು ಮಧ್ಯೆ ಪ್ರವೇಶಿಸಿ ಎಂದು ನಾನು ನರ್ಮದಾ ಕಣಿವೆಯ ಜನರ ಪರವಾಗಿ ನಿಮ್ಮನ್ನು ವಿನಂತಿಸುತ್ತೇನೆ ಎಂದು ಚಾಮ್‌ಸ್ಕಿ ದೂರಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News