ಮುಂದಿನ ಗುರಿ ಗುಜರಾತ್ ವಿಧಾನಸಭಾ ಚುನಾವಣೆ: ಅಹ್ಮದ್ ಪಟೇಲ್

Update: 2017-08-09 17:32 GMT

ಹೊಸದಿಲ್ಲಿ, ಆ.9: ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಖಂಡಿತವಾಗಿಯೂ ಎದುರಿಸುತ್ತೇನೆ ಮತ್ತು ಮುಂದಿನ ಗುರಿ ಗುಜರಾತ್ ವಿಧಾನಸಭೆ ಚುನಾವಣೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.

   ಅಡ್ಡ ಮತದಾನ ನಡೆಸಿದ ಇಬ್ಬರು ಕಾಂಗ್ರೆಸ್ ಶಾಸಕರ ಮತವನ್ನು ಚುನಾವಣಾ ಆಯೋಗ ಅಮಾನ್ಯ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಐದನೇ ಅವಧಿಗೆ ಆಯ್ಕೆಯಾದ ಅಹ್ಮದ್ ಪಟೇಲ್ , ಶಾಸಕರಿಗೆ ಲಂಚದ ಆಮಿಷ ಒಡ್ಡಲಾಗಿತ್ತು . ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿ ಸೆಳೆದುಕೊಳ್ಳಲು ಬಿಜೆಪಿ ಶಕ್ತಿ ಮೀರಿ ಪ್ರಯತ್ನಿಸಿ ವಿಫಲವಾಗಿದೆ. ಪಕ್ಷದ ಶಾಸಕರಿಗೆ ನನ್ನ ವಂದನೆ ಅರ್ಪಿಸುತ್ತೇನೆ ಎಂದರು.

ಮೋದಿಯವರನ್ನು ಅವರ ತವರಿನಲ್ಲೇ ಎದುರಿಸುವುದು ಕಠಿಣ ಸವಾಲು ಎನಿಸುವುದಿಲ್ಲವೇ ಎಂಬ ಪ್ರಶ್ನೆಗೆ, ಗುಜರಾತ್ ಜನತೆ ಬಿಜೆಪಿ ಸರಕಾರದ ಬಗ್ಗೆ ರೋಸಿ ಹೋಗಿದ್ದಾರೆ. ಸರಕಾರದ ಕಾರ್ಯನಿರ್ವಹಣೆ, ಆಡಳಿತದ ವಿಧಾನದ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ ಎಂದು ಪಟೇಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News