ಆ. 18ರಂದು ಕೇರಳದಲ್ಲಿ ಬಸ್ ಬಂದ್

Update: 2017-08-12 17:17 GMT

ಕೊಟ್ಟಾಯಂ, ಆ.12: ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ ಮಾಲಕರ ಅಸೋಶಿಯೇಷನ್ ಕೇರಳದಲ್ಲಿ ಆಗಸ್ಟ್ 18(ಶುಕ್ರವಾರ)ರಂದು ಸಾಂಕೇತಿಕ ಮುಷ್ಕರ ನಡೆಸಲಿದೆ.

ದರ ಹೆಚ್ಚಳದೊಂದಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರುವುದು ಹಾಗೂ ವಾಹನಗಳ ವಿಮಾ ತಂತಿನ ಏರಿಕೆಯನ್ನು ಹಿಂದೆಗೆಯುವ ಬೇಡಿಕೆ ಕೂಡ ಸೇರಿದೆ.

ಸಾಂಕೇತಿಕ ಮುಷ್ಕರದಿಂದ ಯಾವುದೇ ಬೇಡಿಕೆ ಈಡೇರದೇ ಇದ್ದಲ್ಲಿ ಸೆಪ್ಟಂಬರ್ 14ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಅಸೋಶಿಯೇಷನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News