ಮಗನಿಗೆ ಕೃಷ್ಣನ ಪಾತ್ರಕ್ಕೆ ಅವಕಾಶ ನೀಡಿದ ಶಾಲೆಗೆ ಸಿದ್ದಿಕಿ ‘ಥ್ಯಾಂಕ್ಸ್’

Update: 2017-08-13 13:05 GMT

ಮುಂಬೈ,ಆ.13: ಬಾಲಿವುಡ್‌ನ ಪ್ರತಿಭಾವಂತ ನಟ ನವಾಝುದ್ದೀನ್ ಸಿದ್ದಿಕಿ ಸಂಭ್ರಮದಲ್ಲಿದ್ದಾರೆ. ಜನ್ಮಾಷ್ಟಮಿ ಸಮಾರಂಭದಲ್ಲಿ ಮಗ ಯಾನಿಗೆ ಪುಟ್ಟ ಕೃಷ್ಣನ ವೇಷ ಧರಿಸಲು ಅವಕಾಶ ನೀಡಿದ್ದಕ್ಕಾಗಿ ಆತನ ಶಾಲೆಯನ್ನು ಹಾಡಿ ಹೊಗಳಿದ್ದಾರೆ. ಜೊತೆಗೊಂದು ದೊಡ್ಡ ‘ಥ್ಯಾಂಕ್ಸ್’ ಹೇಳಿದ್ದಾರೆ.

ಬಾಲಕೃಷ್ಣನ ವೇಷದಲ್ಲಿ ಕೈಗಳಲ್ಲಿ ಕೊಳಲನ್ನು ಹಿಡಿದುಕೊಂಡು ನಿಂತಿರುವ ಮಗನ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 ನನ್ನ ಮಗನಿಗೆ ‘ನಟಖಟ್ ನಂದಲಾಲ’ನ ಪಾತ್ರ ವಹಿಸಲು ಅವಕಾಶ ನೀಡಿದ್ದು ನನಗೆ ತುಂಬ ಸಂತಸವನ್ನುಂಟು ಮಾಡಿದೆ ಎಂದೂ ಸಿದ್ದಿಕಿ ಬರೆದಿದ್ದಾರೆ.

ಕಳೆದ ವರ್ಷ ಶಿವಸೇನೆಯ ಆಕ್ಷೇಪಣೆಯ ಬಳಿಕ ಸಿದ್ದಿಕಿ ಅವರನ್ನು ರಾಮಲೀಲಾ ಕಾರ್ಯಕ್ರಮವೊಂದರಿಂದ ಕೈಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News