ಎಣ್ಮೂರು ಐವತ್ತೊಕ್ಲು: ಎಂ ವೈ ಎಸ್ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2017-08-16 07:44 GMT

ಎಣ್ಮೂರು, ಆ. 16: ದರ್ಗಾ ಶರೀಫ್ ಮತ್ತು ಜುಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇದರ ಆಶ್ರಯದಲ್ಲಿ ಮುಸ್ಲಿಂ ಯುವಜನ ಸಂಘ (ಎಂ ವೈ ಎಸ್) ಇದರ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.  

ಖತೀಬ್ ಅಬ್ದುರಹೀಂ ಸಖಾಫಿ ಅಲ್ ಅಝ್ಹರಿ ದ್ವಜರೋಹಣಗೈದು, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಜುಮಾ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಪಂಜ ತಾಲೂಕು ಪಂ. ಸದಸ್ಯ  ಅಬ್ದುಲ್ ಗಫೂರ್ ಕಲ್ಮಡ್ಕ, ಗ್ರಾಮ ಪಂ. ಸದಸ್ಯ ಲೋಕೇಶ್ ಆಕ್ರಿಕಟ್ಟೆ, ಸ್ವಾಂತಂತ್ರ್ಯದ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಸದಸ್ಯ  ಜಗದೀಶ್ ಪುರಿಯ, ಜುಮಾ ಮಸ್ಜಿದ್ ಉಪಾಧ್ಯಕ್ಷ  ಅಬ್ದುಲ್ ಖಾದರ್ ಟಿ.ಎಸ್, ಎಂ ವೈ ಎಸ್ ಅಧ್ಯಕ್ಷ ಅಲಿ ಪಡ್ಪಿನಂಗಡಿ, ಮುಚ್ಚಿಲ ಮದ್ರಸ ಸದರ್ ಮುಹಲ್ಲಿಮ್  ಅಬ್ದುಲ್ ರಝಾಕ್ ಬಾಖವಿ, ಮುಹಲ್ಲಿಮ್ ಗಳಾದ ಅಬೂಬಕ್ಕರ್ ಸಅದಿ, ಖಾಸಿಂ ಸಅದಿ, ಅಶ್ರಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.

ರಫೀಕ್ ಐವತ್ತೊಕ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಹನೀಫ್ ಎಂ.ಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News