ಇತ್ತಿಫಾಕ್ ಮೀಲಾದ್ ಕಮಿಟಿ, ಜೋಗಿಬೆಟ್ಟು: ಸ್ವಾತಂತ್ರ್ಯೋತ್ಸವ

Update: 2017-08-16 09:17 GMT

ಜೋಗಿಬೆಟ್ಟು, ಆ. 16: ಇತ್ತಿಫಾಕ್ ಮೀಲಾದ್ ಕಮಿಟಿ, ಜೋಗಿಬೆಟ್ಟು ಇದರ ಆಶ್ರಯದಲ್ಲಿ  ಸ್ವಾತಂತ್ರ್ಯೋತ್ಸವವನ್ನು ಜೋಗಿಬೆಟ್ಟುವಿನಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಬಂಟ್ವಾಳ ತಾಲೂಕು ಪಂ. ಮಾಜಿ ಸದಸ್ಯ ನೇರಳಕಟ್ಟೆ ವ್ಯ.ಸೇ.ಸ. ಬ್ಯಾಂಕ್ ಉಪಾಧ್ಯಕ್ಷ ಕುಶಲ ಎಂ. ಪೆರಾಜೆ ನೆರವೇರಿಸಿದರು. ಮುನೀರುಲ್ ಇಸ್ಲಾಂ ಮದ್ರಸಾ ವನಾಜ್ ಇದರ ಸದರ್ ಮುಅಲ್ಲಿಂ ಅಬ್ದುಲ್ ಮಜೀದ್ ದಾರಿಮಿ ಪ್ರಾರ್ಥನೆಗೈದರು. ಇತ್ತಿಫಾಕ್ ಮೀಲಾದ್ ಕಮಿಟಿ ಅಧ್ಯಕ್ಷ ಅಬ್ದುಲ್ ರಶೀದ್ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ  ಹೈದರ್ ವಿದ್ಯಾನಗರ, ಉಪಾಧ್ಯಕ್ಷ  ಯೂಸುಫ್(ಈಚು) ವಿದ್ಯಾನಗರ, ಜೊತೆ ಕಾರ್ಯದರ್ಶಿ ಝುಬೇರ್ ವಿದ್ಯಾನಗರ, ಕೋಶಾಧಿಕಾರಿ ಅಲ್ತಾಫ್ ವಿದ್ಯಾನಗರ, ಸಂಘಟನಾ ಕಾರ್ಯದರ್ಶಿ ಆಸಿಫ್ ವಿದ್ಯಾನಗರ, ರಿಯಾಝ್ ಸೌದಿ ಅರೇಬಿಯಾ, ಬಶೀರ್ ಸೌದಿ ಅರೇಬಿಯಾ, ಹಸನಾಕ ವಿದ್ಯಾನಗರ, ಸಲ್ಮಾನ್ ಜೋಗಿಬೆಟ್ಟು, ಇಸ್ಮಾಯೀಲ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News