ಪಡುಬಿದ್ರೆ: ಸ್ವಾತಂತ್ರ್ಯೋತ್ಸವ, ಸ್ನೇಹ ಸಂಗಮ ಕಾರ್ಯಕ್ರಮ

Update: 2017-08-16 12:16 GMT

ಪಡುಬಿದ್ರೆ, ಆ. 16: ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಪಡುಬಿದ್ರೆ ಹಾಗೂ ಎಸ್ಸೆಸ್ಸೆಫ್ ಪಡುಬಿದ್ರೆ ಶಾಖೆ ವತಿಯಿಂದ   ಸ್ವಾತಂತ್ರ್ಯೋತ್ಸವ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಕಂಚಿನಡ್ಕ ಮಸ್ಜಿದ್ ವಠಾರದಲ್ಲಿ ನಡೆಯಿತು.

ಪಡುಬಿದ್ರೆ ಮಸ್ಜಿದ್ ಖತೀಬ್ ಅಲ್ಹಾಜ್ ಎಸ್.ಎಂ. ಅಬ್ದುರ್ರಹ್ಮಾನ್ ಮದನಿ ಪ್ರಾರ್ಥನೆ ನಡೆಸಿದರು. ಪಡುಬಿದ್ರೆ ಮಸ್ಜಿದ್ ಅಧ್ಯಕ್ಷ ಹಾಜಿ ಪಿ.ಎ. ಅಬ್ದುರ್ರಹ್ಮಾನ್ ಧ್ವಜಾರೋಹಣ ಗೈದರು. ಎಸ್ಸೆಸ್ಸೆಫ್ ಕಾಪು ಡಿವಿಷನ್ ಎಸ್.ಬಿ.ಎಸ್. ಚಯರ್'ಮ್ಯಾನ್ ಎಂ.ಎಚ್.ಎಂ. ಕಲಂದರ್ ರಝ್ವಿ ಬೆಜ್ಜವಳ್ಳಿ ಸಂದೇಶ ಭಾಷಣ ಮಾಡಿದರು.

ಕಂಚಿನಡ್ಕ ಮಸ್ಜಿದ್ ಖತೀಬ್ ಅಬ್ದುಲ್ ಲತೀಫ್ ಮದನಿ, ನೂರುಲ್ ಹುದಾ ಮದರಸ ಪಡುಬಿದ್ರೆ ಮತ್ತು ಕಂಚಿನಡ್ಕ ಸದರ್ ಮುಅಲ್ಲಿಮ್ ಅಶ್ರಫ್ ಸಅದಿ, ಎಸ್ಸೆಸ್ಸೆಫ್ ಪಡುಬಿದ್ರೆ ಶಾಖೆ ಗೌರವಾಧ್ಯಕ್ಷ ಪಿ.ಎಂ.ಎಸ್. ಸಿದ್ದೀಖ್ ಮುಸ್ಲಿಯಾರ್, ಎಸ್ಸೆಸ್ಸೆಫ್ ಪಡುಬಿದ್ರೆ ಶಾಖೆ ಅಧ್ಯಕ್ಷ ನಿಯಾಝ್ ದೀನ್'ಸ್ಟ್ರೀಟ್, ಮಸ್ಜಿದ್ ಪ್ರ.ಕಾರ್ಯದರ್ಶಿ ಶೇಖ್ ಇಸ್ಮಾಯಿಲ್ ಮಾಸ್ಟರ್, ಎಸ್ಸೆಸ್ಸೆಫ್ ಪಡುಬಿದ್ರೆ ಮಾಜಿ ಅಧ್ಯಕ್ಷ ಶಂಸುದ್ದೀನ್ ಸಅದಿ ಮುಖ್ಯ ಅತಿಥಿಗಳಾಗಿ ಹಾಜರಿದ್ದರು.

ಜಮಾಅತಿಗರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಮೀದ್ ಮದನಿ ಮಾಣಿ, ಅಶ್ರಫ್ ಸಅದಿ ಕಡಬ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News