ಮೋಹನ್ ಭಾಗವತ್‌ಗೆ ರಾಷ್ಟ್ರಧ್ವಜ ಆರೋಹಣಕ್ಕೆ ನಿಷೇಧ ವಿಧಿಸಿದ್ದ ಜಿಲ್ಲಾಧಿಕಾರಿ ವರ್ಗಾವಣೆ

Update: 2017-08-17 17:11 GMT

ಪಾಲಕ್ಕಾಡ್, ಆ. 17: ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸರಕಾರಿ ಶಾಲೆಯಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ನಿರ್ಬಂಧ ವಿಧಿಸಿದ್ದ ಪಾಲಕ್ಕಾಡ್‌ನ ಜಿಲ್ಲಾಧಿಕಾರಿ ಪಿ. ಮೇರಿಕುಟ್ಟಿ ಅವರನ್ನು ಗುರುವಾರ ವರ್ಗಾವಣೆ ಮಾಡಲಾಗಿದೆ.

ಆದಾಗ್ಯೂ ಕೇರಳ ಸರಕಾರ, ಇದು ವಾಡಿಕೆಯ ವರ್ಗಾವಣೆ. ಮೇರಿಕುಟ್ಟಿ ಅವರೊಂದಿಗೆ ಇತರ ನಾಲ್ವರು ಜಿಲ್ಲಾಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ ಎಂದಿದೆ.

ಮೇರಿಕುಟ್ಟಿ ಅವರನ್ನು ಪಂಚಾಯತ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಅವರ ಸ್ಥಾನಕ್ಕೆ ಸುರೇಶ್ ಬಾಬು ಅವರನ್ನು ನಿಯೋಜಿಸಲಾಗಿದೆ. ಈ ನಿರ್ಧಾರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸಂಪುಟ ಸಭೆ ಸಂದರ್ಭ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News