ನೆರೆಗೆ ಈಶಾನ್ಯ-ಉತ್ತರ ತತ್ತರ: ಸಾವಿನ ಸಂಖ್ಯೆ 350ಕ್ಕೇರಿಕೆ

Update: 2017-08-19 15:48 GMT

ಹೊಸದಿಲ್ಲಿ, ಆ. 19: ಈಶಾನ್ಯ ಹಾಗೂ ಉತ್ತರ ಭಾರತದ ರಾಜ್ಯಗಳು ತೀವ್ರ ನೆರೆಯಿಂದ ತತ್ತರಿಸಿದ್ದು, ಕಳೆದ ಒಂದು ವಾರದಲ್ಲಿ ಕನಿಷ್ಠ 350 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ ಹಾಗೂ 1 ಕೋಟಿಗೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ.

  ಬಿಹಾರ್, ಅಸ್ಸಾಂ ಹಾಗೂ ಉತ್ತರ ಪ್ರದೇಶ ನೆರೆಯಿಂದ ತೀವ್ರ ಬಾಧಿತವಾಗಿದೆ. ಪಶ್ಚಿಮಬಂಗಾಳ ಹಾಗೂ ಅಸ್ಸಾಂನಲ್ಲಿ ನೆರೆ ಇಳಿಯುತ್ತಿದೆ. ನೆರೆಯಿಂದಾಗಿ ಬಿಹಾರದಲ್ಲಿ 153 ಜನರು ಸಾವನ್ನಪ್ಪಿದ್ದು, 1 ಕೋಟಿಗೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಅಸ್ಸಾಂನಲ್ಲಿ 144 ಮಂದಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸಲು ಸರಕಾರ ಸೇನೆಯ ನೆರವು ಕೋರಿದೆ. ಉತ್ತರ ಬಂಗಾಳ ಸಹಜ ಸ್ಥಿತಿಗೆ ಮರಳುತ್ತಿದ್ದು, ಇಲ್ಲಿ 52 ಜನರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News