ಉಡುಪಿ: ಬ್ಯಾಂಕ್ ಅಧಿಕಾರಿ, ನೌಕರರ ಸಾರ್ವತ್ರಿಕ ಪ್ರತಿಭಟನೆ

Update: 2017-08-22 07:23 GMT

ಉಡುಪಿ, ಆ. 22: ಬ್ಯಾಂಕ್ ಅಧಿಕಾರಿ ಮತ್ತು ನೌಕರರ ಸಂಘಟನೆಹಳ  ಒಕ್ಕೂಟದ ಕರೆಯೋಲೆಯ ಮೇರೆಗೆ ಇಂದು ಬ್ಯಾಂಕ್ ಮುಷ್ಕರ ಉಡುಪಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಬಳಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು.

ಕೇಂದ್ರ ಸರಕಾರದ ನೌಕರ ವಿರೋಧಿ ನೀತಿಗಳಾದ ಬ್ಯಾಂಕ್ ಗಳ ಖಾಸಗೀಕರಣ ಮತ್ತು ವಿಲೀನ, ಕಾರ್ಪೋರೇಟ್ ಮಲಯದ ಸುಸ್ತಿ ಸಾಲದ ಮನ್ನಾ ಹಾಗು ಹಲವು ಬೇಡಿಕೆಗಳ ಈಡೇರಿಕೆ ಒತ್ತಾಯಿಸಲಾಯಿತು.

ಈ ಸಂದರ್ಭ ಸಿಂಡಿಕೇಟ್ ಬ್ಯಾಂಕ್ ನ ರವಿ, ಶಶಿಧರ ಶೆಟ್ಟಿ, ಕೆನರಾ ಬ್ಯಾಂಕ್ ನ ವರದರಾಜ ಹಾಗೂ ರವೀಂದ್ರ, ಭಾರತೀಯ ಸ್ಟೇಟ್ ಬ್ಯಾಂಕ್ ನ ಕೆ.ಆರ್. ಶೆಣೈ ಹಾಗೂ ಪ್ರಕಾಶ್ ಜೋಗಿ, ಕರ್ನಾಟಕ ಬ್ಯಾಂಕ್ ನ ನಿತ್ಯಾನಂದ ಹಾಗೂ ರವಿಶಂಕರ್, ಕಾರ್ಪೋರೇಶನ್ ಬ್ಯಾಂಕ್ ನ ರಘುರಾಮಕೃಷ್ಣ ಬಲ್ಲಾಳ್ ಮತ್ತು ನಾಗೇಶ ನಾಯಕ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News