ತವಕ್ಕಲ್ ಹೆಲ್ಪ್ ಲೈನ್ ಕರ್ನಾಟಕ: ಪದಾಧಿಕಾರಿಗಳ ಆಯ್ಕೆ

Update: 2017-08-26 12:19 GMT

ಕತರ್, ಆ. 26: ತವಕ್ಕಲ್  ಹೆಲ್ಪ್ ಲೈನ್ ಕರ್ನಾಟಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಕತರ್ ನಲ್ಲಿ ನಡೆಯಿತು.

ತವಕ್ಕಲ್ ಹೆಲ್ಪ್ ಲೈನ್ ಕರ್ನಾಟಕ ಇದರ ಅಧ್ಯಕ್ಷರಾಗಿ ನದೀಮ್ ಅಯ್ಯಪ್ಪ ನಗರ ಕಾರ್ಕಳ ಆಯ್ಕೆಯಾದರು. ಗ್ರೂಪ್ ಅಡ್ಮಿನ್ ಆಗಿ ಸಾಜುದ್ದೀನ್ ಕತಾರ್, ಪದಾಧಿಕಾರಿಯಾಗಿ ತಾರೀಫ್ ಪಡುಬಿದ್ರೆ ಹಾಗು ಸದಸ್ಯರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. 

ಮಾಜಿ ಅಧ್ಯಕ್ಷ, ಝಮೀರ್ ಕತರ್, ಇನಾಯತ್ ಕಾರ್ಕಳ ಹಾಗು ಗ್ರೂಪ್ ನ ಸದಸ್ಯರು ಆಯ್ಕೆಯಾದ ಸಂಘದ ಅಧ್ಯಕ್ಷ, ಪದಾಧಿಕಾರಿಗಳಿಗೆ ಶುಭಕೋರಿದರು.

ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಬಡ ಯುವತಿಯರ ಮದುವೆಗೆ ಹಾಗೂ ಚಿಕಿತ್ಸೆಗೆ ಸಹಾಯ ಮಾಡುವುದು ಉದ್ದೇಶವಾಗಿದೆ ಎಂದು ಸಂಘದ ಪದಾಧಿಕಾರಿಗಳು ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News