ಮುಂಬೈ: ಮಳೆ ನೀರು ಮನೆಯೊಳಗೆ ನುಗ್ಗದಂತೆ ನಟಿ ಲಾರಾ ದತ್ತ ಮಾಡಿದ ಕೆಲಸವೇನು ಗೊತ್ತೇ?

Update: 2017-08-29 18:12 GMT

ಮುಂಬೈ, ಆ.29: ಮುಂಬೈ ಮಹಾನಗರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ರಸ್ತೆಗಳು, ರೈಲು ಹಳಿಗಳು, ಆಸ್ಪತ್ರೆಗಳು ಹಾಗೂ ಮನೆಗಳು ನೀರಿನಿಂದ ಮುಳುಗಡೆಯಾಗಿವೆ. ನಟಿ ಲಾರಾ ದತ್ತ ಭೂಪತಿ ಕೂಡಾ ಮಹಾಮಳೆಯ ಸಮಸ್ಯೆ ಎದುರಿಸಿದ್ದು ಮನೆಯ ದೊಡ್ಡ ಗಾಜಿನ ಬಾಗಿಲಿನ ಕೆಳಭಾಗದಿಂದ ನೀರು ನುಗ್ಗದಂತೆ ತಡೆಯಲು ತನ್ನ ಪತಿ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಬಳಸುತ್ತಿದ್ದ ಟವಲ್‌ಗಳನ್ನು ಬಳಸಿದ್ದಾರೆ. ಈ ಚಿತ್ರವನ್ನು ಟ್ವಿಟರ್ ಪೇಜ್‌ನಲ್ಲಿ ಹಾಕಿದ್ದಾರೆ.

 ವಿಂಬಲ್ಡನ್, ಯುಎಸ್ ಓಪನ್, ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್‌ನಲ್ಲಿ ಭೂಪತಿ ಬಳಸಿದ್ದ ಟವಲ್‌ಗಳನ್ನು ಗಜಗಾತ್ರದ ಗಾಜಿನ ಬಾಗಿಲಿನ ಒಳಗೆ ಮಳೆನೀರು ನುಸುಳದಂತೆ ಇಟ್ಟಿದ್ದೇನೆ. ಟವಲ್‌ಗಳನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದೇನೆ. ನನ್ನ ಈ ಕೆಲಸಕ್ಕೆ ಮಹೇಶ್ ಭೂಪತಿ ಏನೂ ಹೇಳಿಲ್ಲ’’ ಎಂದು ಲಾರಾ ದತ್ತ ಟ್ವೀಟ್ ಮಾಡಿದ್ದಾರೆ.

‘‘ನನ್ನನ್ನು ತಮಾಷೆ ಮಾಡುತ್ತೀಯ. ಇದು ನನ್ನ ಹಲವು ವರ್ಷಗಳ ಕಠಿಣ ಪರಿಶ್ರಮದ ಫಲ’’ ಎಂದು ಭೂಪತಿ ತನ್ನ ಪತ್ನಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಟೆನಿಸ್‌ನ ಓರ್ವ ಲೆಜೆಂಡ್ ಆಟಗಾರನಾಗಿರುವ ಭೂಪತಿ ನಾಲ್ಕು ಪುರುಷರ ಡಬಲ್ಸ್ ಗ್ರಾನ್‌ಸ್ಲಾಮ್ ಪ್ರಶಸ್ತಿಗಳು ಹಾಗೂ 8 ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

 ಆಸ್ಟ್ರೇಲಿಯನ್ ಓಪನ್ ಎರಡು ಬಾರಿ, ಫ್ರೆಂಚ್ ಓಪನ್ 4 ಬಾರಿ, ವಿಂಬಲ್ಡನ್ ಓಪನ್ 3 ಬಾರಿ ಹಾಗೂ ಯುಎಸ್ ಓಪನ್‌ನ್ನು 3 ಬಾರಿ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News