ಇಂದ್ರಾಳಿ: ರೈಲು ಢಿಕ್ಕಿಯಾಗಿ ಅಪರಿಚಿತ ಮೃತ್ಯು

Update: 2017-09-04 06:00 GMT

ಉಡುಪಿ, ಸೆ.4: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ರೈಲು ಬಡಿದು ಸ್ಥಳದಲ್ಲೆ ಸಾವನಪ್ಪಿದ ಘಟನೆ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಸೋಮವಾರ ಬೆಳಗ್ಗೆ ನಡೆದಿದೆ. 

ಮೃತರ ಗುರುತು ಪತ್ತೆಯಾಗಿಲ್ಲ. ಸುಮಾರು 65 ವರ್ಷ ಪ್ರಾಯದ ಈ ವ್ಯಕ್ತಿ ಇಂದು ಬೆಳಗ್ಗೆ ರೈಲು ಹಳಿಯ ಸನಿಹದಿಂದ ನಡೆದುಕೊಂಡು ಹೋಗತ್ತಿದ್ದ ವೇಳೆ ಆಕಸ್ಮಿಕವಾಗಿ ಎರ್ನಾಕುಲಂನಿಂದ ಅಜ್ಮೀರ್ ಗೆ ಹೋಗುವ ರೈಲು ಢಿಕ್ಕಿಯಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯು ಬಿಳಿ ಗಡ್ಡಧಾರಿಯಾಗಿದ್ದು, ಉದ್ದ ಕಪ್ಪು ತಲೆ ಹೊಂದಿದ್ದಾರೆ. ಅಂದಾಜು 65 ವರ್ಷ ಪ್ರಾಯದವರಾಗಿದ್ದು, ಸದೃಢ ದೇಹಕಾಯ ಹೊಂದಿದ್ದಾರೆ. ಅರ್ಧ ಕೈತೋಳಿನ ಶರ್ಟು, ನೀಲಿ ಬಣ್ಣದ ಒಳ ಉಡುಪು, ಬರ್ಮುಡ ಚಡ್ಡಿ ಧರಿಸಿದ್ದಾರೆ. ವಾರಸುದಾರರು ಮಣಿಪಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ಸ್ಥಳ ಪರಿಶೀಲನೆ ನಂತರ ಮೃತದೇಹವನ್ನು ಮಣಿಪಾಲದ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಶಿರೂರು ತಾರಾನಾಥ್ ಮೇಸ್ತ ಅವರು ಪೊಲೀಸರಿಗೆ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News