ಶಾಸಕರ ಸಭೆ ನಡೆಸಿದ ಎಐಎಡಿಎಂಕೆ

Update: 2017-09-05 16:53 GMT

ಚೆನ್ನೈ, ಸೆ. 4: ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ವಿರೋಧ ಪಕ್ಷಗಳಿಂದ ಹೆಚ್ಚುತ್ತಿರುವ ಒತ್ತಡದ ನಡುವೆ, ಏಕೀಕೃತ ಆಡಳಿತಾರೂಢ ಎಐಎಡಿಎಂಕೆ 111 ಶಾಸಕರು ಪಾಲ್ಗೊಳ್ಳಲಿರುವ ಶಾಸಕರ ನಿರ್ಣಾಯಕ ಸಭೆಯನ್ನು ಮಂಗಳವಾರ ನಡೆಸಿದೆ.

ಒಟ್ಟು 111 ಮಂದಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದೇವೆ. ಇದು ಪಕ್ಷದ ಅತೀ ದೊಡ್ಡ ಗೆಲುವು ಎಂದು ಎಐಎಡಿಎಂಕೆಯ ಹಿರಿಯ ನಾಯಕ ಹಾಗೂ ಮೀನುಗಾರಿಕೆ ಸಚಿವ ಡಿ. ಜಯಕುಮಾರ್ ಪ್ರತಿಪಾದಿಸಿದ್ದಾರೆ.

ಪಳನಿ ಸ್ವಾಮಿ ಅವರಿಗೆ ಬೆಂಬಲಿಸುವ ನಿರ್ಣಯಕ್ಕೆ ಎಲ್ಲ ಶಾಸಕರು ಸಹಿ ಹಾಕಿದ್ದಾರೆ. ಇಬ್ಬರು ಶಾಸಕರು ಅನಾರೋಗ್ಯದ ಕಾರಣದಿಂದ ಸಭೆಗೆ ಹಾಜರಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

  ಉಚ್ಛಾಟಿತ ನಾಯಕ ಟಿಟಿವಿ ದಿನಕರನ್‌ರನ್ನು ಬೆಂಬಲಿಸುವ 21 ಶಾಸಕರಲ್ಲಿ 9 ಮಂದಿ ಶಾಸಕರು ಪುದುಚೇರಿಯ ರೆಸಾರ್ಟ್‌ನಲ್ಲಿದ್ದು, ಅವರು ಪಳನಿಸ್ವಾಮಿ ಅವರಿಗೆ ಮಂಗಳವಾರ ಕರೆ ಮಾಡಿ ಬೆಂಬಲ ಘೋಷಿಸಿದ್ದಾರೆ ಎಂದು ಜಯಕುಮಾರ್ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News