ಉತ್ತರಪ್ರದೇಶ: ಬೋಗಿಯಿಂದ ಬೇರ್ಪಟ್ಟ ಇಂಜಿನ್

Update: 2017-09-08 18:22 GMT

ಬಾದೋಹಿ, ಸೆ. 8: ಹೊಸದಿಲ್ಲಿ-ಮಂದುವಾದಿಹ್ ಶಿವಗಂಗಾ ಎಕ್ಸ್‌ಪ್ರೆಸ್‌ನ ಬೋಗಿಯಿಂದ ಇಂಜಿನ್ ಬೇರ್ಪಟ್ಟು ಒಂದು ಕಿಲೋಮೀಟರ್ ಸಂಚರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಇಂದು ಬೆಳಗ್ಗೆ ರೈಲು ಜ್ಞಾನಪುರ ರೈಲ್ವೆ ನಿಲ್ದಾಣಕ್ಕೆ ತಲುಪುವ ಸಂದರ್ಭ ಈ ಘಟನೆ ನಡೆದಿದೆ. ಜ್ಞಾನಪುರ ರೈಲು ನಿಲ್ದಾಣ ಹಾಗೂ ಜಂಗಿಗಂಜ್ ರೈಲು ನಿಲ್ದಾಣದ ನಡುವೆ ಬೆಳಗ್ಗೆ 10.15ಕ್ಕೆ ರೈಲಿನ ಬೋಗಿಯಿಂದ ಇಂಜಿನ್ ಬೇರ್ಪಟ್ಟಿತು. ಹಾಗೂ ಒಂದು ಕಿಲೋಮೀಟರ್ ಸಂಚರಿಸಿತು ಎಂದು ಸ್ಟೇಶನ್ ಮಾಸ್ಟರ್ ಅಶೋಕ್ ಕುಮಾರ್ ಹೇಳಿದ್ದಾರೆ.

ಆನಂತರ ಗೇಟ್ ನಂಬರ್ 42ಬಿಯಲ್ಲಿ ಬೋಗಿಯನ್ನು ಇಂಜಿನ್‌ಗೆ ಜೋಡಿಸಲಾಯಿತು. ಬೆಳಗ್ಗೆ 10.06ಕ್ಕೆ ರೈಲು ಪ್ರಯಾಣ ಮುಂದುವರಿಸಿತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News