ಪತ್ರಕರ್ತನ ಮೇಲಿನ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು: ಶಾಸಕ ಕೆ.ಕುಂಞಿರಾಮನ್

Update: 2017-09-09 11:49 GMT

ಮಂಜೇಶ್ವರ, ಸೆ.9: ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಯ ಮನೆಯ ಮೇಲೆ ನಡೆದ ಪೊಲೀಸ್ ದಾಳಿಗೆ ಸಂಬಂಧಿಸಿ ವರದಿ ಮಾಡಿದ ಆರೋಪದಲ್ಲಿ 'ವಾರ್ತಾಭಾರತಿ' ವರದಿಗಾರನನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡನೀಯ ಉದುಮ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಕುಂಞಿರಾಮನ್ ಹೇಳಿದ್ದಾರೆ.

ಈ ಮೂಲಕ ಪತ್ರಿಕೆಯ ಧ್ವನಿಯನ್ನು ಅಡಗಿಸುವ ಯತ್ನವನ್ನು ಪೊಲೀಸರು ನಡೆಸುತ್ತಿದ್ದಾರೆ. ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮವಾಗಿದೆ. ‘ವಾರ್ತಾಭಾರತಿ’ ವರದಿಗಾರನ ಮೇಲಿನ ಪ್ರಕರಣವನ್ನು ಪೊಲೀಸರು ಕೂಡಲೇ ಹಿಂಪಡೆಯಬೇಕು ಎಂದು ಕುಂಞಿರಾಮನ್  ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News