ಶರೀಫ್ ಮರುಪರಿಶೀಲನೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2017-09-15 16:55 GMT

ಇಸ್ಲಾಮಾಬಾದ್, ಸೆ. 15: ಪನಾಮ ದಾಖಲೆಪತ್ರ ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ಹುದ್ದೆಯಿಂದ ನವಾಝ್ ಶರೀಫ್‌ರನ್ನು ಅನರ್ಹಗೊಳಿಸಿ ನೀಡಿದ ತೀರ್ಪಿನ ಮರುಪರಿಶೀಲನೆ ನಡೆಸುವಂತೆ ಕೋರಿ ಶರೀಫ್, ಅವರ ಮಕ್ಕಳು ಮತ್ತು ಹಣಕಾಸು ಸಚಿವ ಇಶಾಕ್ ದಾರ್ ಸಲ್ಲಿಸಿರುವ ಅರ್ಜಿಗಳನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.

 ನ್ಯಾಯಾಲಯದ ಜುಲೈ 28ರ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾ. ಆಸಿಫ್ ಸಯೀದ್ ಖೋಸ ನೇತೃತ್ವದ ಐವರು ಸದಸ್ಯರ ಪೀಠವೊಂದು ಕೈಗೆತ್ತಿಕೊಂಡಿತ್ತು.

‘‘ಹಲವಾರು ಕಾರಣಗಳಿಗಾಗಿ ಈ ಎಲ್ಲ ಮರುಪರಿಶೀಲನಾ ಅರ್ಜಿಗಳನ್ನು ತಳ್ಳಿಹಾಕಲಾಗಿದೆ’’ ಎಂದು ನ್ಯಾಯಮೂರ್ತಿ ಖೋಸ ಘೋಷಿಸಿದರು.

ಈ ತೀರ್ಪಿಗೆ ಕಾರಣಗಳನ್ನು ಮುಂದೆ ನೀಡಲಾಗುವ ವಿಸ್ತೃತ ಆದೇಶದಲ್ಲಿ ನೀಡಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News