ಕಾಡಾನೆಗಳಿಗೆ 2 ರೊಹಿಂಗ್ಯನ್ನರು ಬಲಿ

Update: 2017-09-18 17:18 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 18: ಮ್ಯಾನ್ಮಾರ್‌ನಿಂದ ಪಲಾಯನಗೈದು ಬಾಂಗ್ಲಾದೇಶದ ಶಿಬಿರಗಳಲ್ಲಿ ವಾಸಿಸುತ್ತಿದ್ದ ರೊಹಿಂಗ್ಯಾ ನಿರಾಶ್ರಿತರ ಮೇಲೆ ಕಾಡಾನೆಗಳು ದಾಳಿ ನಡೆಸಿ ಇಬ್ಬರನ್ನು ತುಳಿದು ಕೊಂದಿವೆ.

ರೊಹಿಂಗ್ಯಾ ಮುಸ್ಲಿಮರು ಶಿಬಿರಗಳನ್ನು ನಿರ್ಮಿಸಿದ್ದ ಸ್ಥಳದಲ್ಲಿ ಕಾಡಾನೆಗಳು ಸೋಮವಾರ ದಾಂಧಲೆ ನಡೆಸಿವೆ.

‘‘ರೊಹಿಂಗ್ಯಾ ಮುಸ್ಲಿಮರು ಶಿಬಿರಗಳನ್ನು ನಿರ್ಮಿಸುವುದಕ್ಕಾಗಿ ಕಾಡುಗಳನ್ನು ಕಡಿಯುತ್ತಿದ್ದಾರೆ. ಅದರ ಸಮೀಪದಲ್ಲೇ ಕಾಡಾನೆಗಳು ವಾಸಿಸುತ್ತಿವೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News