ಪಿಯುಸಿ ಪರೀಕ್ಷಾ ಸಮಯ ಬದಲಾವಣೆಗೆ ಮನವಿ

Update: 2017-09-22 09:24 GMT

ಮಂಗಳೂರು, ಸೆ. 22: ಪ್ರಥಮ ಪಿಯುಸಿ ಮಧ್ಯಾವಧಿ ಪರೀಕ್ಷೆಯು ಅಕ್ಟೋಬರ್ 9ರಿಂದ ಮಧ್ಯಾಹ್ನ ಗಂಟೆ 1:15ಕ್ಕೆ ನಿಗದಿಯಾಗಿದೆ. ಈ ಸಮಯದಲ್ಲಿ ಶುಕ್ರವಾರ ಕಡ್ಡಾಯ ಪ್ರಾರ್ಥನೆ ಇರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗುತ್ತದೆ. ಇದನ್ನು ಮನಗಂಡು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಎಸ್.ವೈ.ಎಸ್ ನಾಯಕರಾದ ಅಶ್ರಫ್ ಕಿನಾರೆ, ಅಬ್ದುಲ್ ರಹಿಮಾನ್ ಹಾಜಿ ಪ್ರಿಂಟೆಕ್, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಹಾಗೂ ಜಿಲ್ಲಾ ನಾಯಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಉಪ ನಿರ್ದೇಶಕರಾದ ತಿಮ್ಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಉಪ ನಿರ್ದೇಶಕರು ಮನವಿಯನ್ನು ಸ್ವೀಕರಿಸಿ ಪೂರಕ ಸ್ಪಂದನೆಯ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News