ಉಕ್ರೈನ್ ರಾಯಭಾರಿಯ ಮೊಬೈಲ್ ಕಳವು

Update: 2017-09-22 14:29 GMT

ಚೆನ್ನೈ, ಸೆ. 22: ಭಾರತದಲ್ಲಿರುವ ಉಕ್ರೈನ್ ರಾಯಭಾರಿ ಇಗೂರ್ ಪೊಲಿಖಾ ಅವರ ಮೊಬೈಲ್ ಫೋನ್ ಕೆಂಪು ಕೋಟೆ ಸಮೀಪ ಸೆಲ್ಫಿ ತೆಗೆಯುವಾಗ ಕಳವುಗೈಯಲಾಗಿದೆ. ಈ ಬಗ್ಗೆ ಅವರು ಗೃಹ ಸಚಿವಾಲಯ ಹಾಗೂ ದಿಲ್ಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಕೆಂಪು ಕೋಟೆಯ ಸಮೀಪ ನಾನು ಮೊಬೈಲ್‌ನಿಂದ ಸೆಲ್ಫಿ ತೆಗೆಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ನನ್ನ ಕೈಯಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲಿಖಾ ತಿಳಿಸಿದ್ದಾರೆ.

 ಬೆಳಗ್ಗೆ 9.15ರ ವೇಳೆಗೆ ನಾನು ಏಕಾಂಗಿಯಾಗಿದ್ದಾಗ ಈ ಕಳವು ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ತಂಡವೊಂದನ್ನು ರೂಪಿಸಲಾಗಿದೆ. ತಂಡ ಶೀಘ್ರದಲ್ಲಿ ಕಳ್ಳನನ್ನು ಬಂಧಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News