ತೊಕ್ಕೊಟ್ಟು: ಎಸ್ಸೆಸ್ಸೆಫ್ ಧ್ವಜ ದಿನಾಚರಣೆ

Update: 2017-09-26 06:09 GMT

ತೊಕ್ಕೊಟ್ಟು, ಸೆ.26: ಎಸ್ಸೆಸ್ಸೆಫ್ ಧ್ವಜ ದಿನದ ಪ್ರಯುಕ್ತ ತೊಕ್ಕೊಟ್ಟು ಹಿದಾಯತ್ ನಗರ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಇಲ್ಲಿನ ಹಿದಾಯತ್ ನಗರ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ಅಧ್ಯಕ್ಷ ಹಸನ್ ಮುಬಾರಕ್ ಸಖಾಫಿ ಧ್ವಜಾರೋಹಣ ನೆರೆವೇರಿಸಿ, ಎಸ್ಸೆಸ್ಸೆಫ್  ನ ಮಹತ್ವವನ್ನು ವಿವರಿಸಿದರು.
ಉಳ್ಳಾಲ್ ನಗರ ಸಭೆಯ ಸದಸ್ಯ ಫಾರುಕ್ ಯು.ಎಚ್. ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ ಉಳ್ಳಾಲ ಸೈಯದ್ ಮದನಿ ದರ್ಗಾ ಸದಸ್ಯರಾದ ಮುಹಮ್ಮದ್, ತೊಕ್ಕೊಟ್ಟು ಸೆಕ್ಟರ್ ಪ್ರ. ಕಾರ್ಯದರ್ಶಿ ಜಾಫರ್ ಯು.ಎಸ್., ಸೆಕ್ಟರ್ ರಿಲೀಫ್ ಸರ್ವಿಸ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಎಸ್.ವೈ.ಎಸ್. ಸದಸ್ಯರಾದ ಅಮೀರ್ ತೊಕ್ಕೊಟ್ಟು ಉಪಸ್ಥಿತರಿದ್ದರು.
ಶಾಖಾ ಪ್ರ. ಕಾರ್ಯದರ್ಶಿ ಮುಹಮ್ಮದ್ ರಾಝಿಕ್ ಸ್ವಾಗತಿಸಿದರು. ಶಾಖಾ ಕಾರ್ಯದರ್ಶಿ ಮುನವ್ವರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News