ನಂತೂರು: ರಿಕ್ಷಾ ಚಾಲಕರಿಂದ ಸ್ವಚ್ಛತೆ
Update: 2017-10-03 12:07 GMT
ಮಂಗಳೂರು, ಅ.3: ಗಾಂಧಿ ಜಯಂತಿಯ ಪ್ರಯುಕ್ತ ನಂತೂರಿನ ರಿಕ್ಷಾ ಚಾಲಕರು ರಸ್ತೆ ಬದಿ ಸ್ವಚ್ಛಗೊಳಿಸಿದರು. ನಗರ ನೈರ್ಮಲೀಕರಣಕ್ಕೆ ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹ ವಾಹನಗಳನ್ನು ಒದಗಿಸಿತ್ತು.
50ಕ್ಕೂ ಹೆಚ್ಚು ರಿಕ್ಷಾ ಚಾಲಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದಲ್ಲದೆ ನಂತೂರು ಸರ್ಕಲ್ ಸುತ್ತಮುತ್ತ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಡಿಯನ್ನು ತಾವೇ ಮುಚ್ಚಿದ್ದಾರೆ. ಐ ಸರ್ಚ್ ಮತ್ತು ಇನ್ಸೈಡ್ ಅಟೋಮೋಟಿವ್ ಡಿಜಿಟಲ್ ಸೈನೇಜ್ ರಿಕ್ಷಾ ಚಾಲಕರು ಈ ಕಾರ್ಯಕ್ಕೆ ಬೆಂಬಲ ನೀಡಿದ್ದಾರಲ್ಲದೆ, ಹಿರಿಯ ರಿಕ್ಷಾ ಚಾಲಕ ಗಣೇಶ್ ಆಚಾರ್ಯರನ್ನು ಸನ್ಮಾನ ಮಾಡಿದರು.
ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷ ಹರೀಶ್ ಮಾಡೂರು, ಕಾರ್ಯದರ್ಶಿ ಆಲ್ಫೋನ್ಸ್ ಡಿಸೋಜ, ಪ್ರಕಾಶ್ ಶಕ್ತಿನಗರ, ಐ ಸರ್ಚ್ನ ಪ್ರಕಾಶ್ ನಾಯಕ್, ಉದಯಕುಮಾರ್ ಪಾಲ್ಗೊಂಡಿದ್ದರು.