ಅ.8ರಂದು ಮಂಚಿ ಕಯ್ಯೂರಿನಲ್ಲಿ ರಕ್ತದಾನ ಶಿಬಿರ

Update: 2017-10-04 06:32 GMT

ಬಂಟ್ವಾಳ, ಅ.4: ಮಂಚಿ- ಕಯ್ಯೂರಿನ ಬದ್ರಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಪಂಚ ವಾರ್ಷಿಕೋತ್ಸವದ ಅಂಗವಾಗಿ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಮತ್ತು ಸಾಲೆತ್ತೂರು-ಕೊಳ್ನಾಡಿನ ಲಯನ್ಸ್ ಕ್ಲಬ್ಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಅ.8ರಂದು ಮಂಚಿಕಟ್ಟೆಯ ಲಯನ್ಸ್ ಕ್ಲಬ್ನಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರ ವರೆಗೆ ನಡೆಯುವ ಶಿಬಿರವನ್ನು ಮಂಚಿ ರಿಫಾಯಿಯ್ಯಾ ಜುಮಾ ಮಸೀದಿಯ ಖತೀಬ್ ಸಾಲಿಂ ಸಅದಿ ಅಲ್ ಅಫ್ಳಳಿ ಮಂಚಿ ಉದ್ಘಾಟಿಸುವರು. ಬದ್ರಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎನ್.ಫಾರೂಕ್ ಅಧ್ಯಕ್ಷತೆ ವಹಿಸುವರು.

ರಿಫಾಯಿಯ್ಯ್ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್ ಲತೀಫಿ ಎಣ್ಮೂರು, ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಅಶ್ರಫ್ ಮಂಚಿ, ಲ.ರೇಮಂಡ್ ರೊಝಾರಿಯೊ, ಲ.ಗೋಪಾಲ್ ಆಚಾರ್ಯ, ಎಂ.ಡಿ. ಮಂಚಿ, ಮುಸ್ತಫಾ ಅಡ್ಡೂರು ದೆಮ್ಮಲೆ, ಸತ್ತಾರ್ ಕೃಷ್ಣಾಪುರ, ಅಶ್ರಫ್ ಕಲ್ಕಟ್ಟ, ದಿನೇಶ್ ಕುಮಾರ್ ಕಯ್ಯೂರು, ಬದ್ರುದ್ದೀನ್ ಕಯ್ಯೂರು, ಮುಹಮ್ಮದ್ ಮಂಚಿ, ಮೋಹನ್ ದಾಸ್ ಶೆಟ್ಟಿ, ಇಬ್ರಾಹೀಂ ಜಿ.ಎಂ., ಎಂ.ಎಸ್.ಸುಲೈಮಾನ್, ಆಸಿಫ್ ಸಿ.ಎಚ್., ಹನೀಫ್ ಮಂಚಿ, ಎ.ಕೆ.ಸುಲೈಮಾನ್, ಗಫ್ಫಾರ್ ಕುಕ್ಕಾಜೆ ಮೊದಲಾದವರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News