ಅ. 6: ಬಡ ಕುಟುಂಬದ ಮದುವೆಗೆ ಚಿನ್ನ ವಿತರಣೆ, ಪ್ರಾರ್ಥನಾ ಸಂಗಮ

Update: 2017-10-05 10:34 GMT

ತೊಕ್ಕೋಟ್ಟು, ಅ. 5: ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ವತಿಯಿಂದ ಅ.6 ರಂದು ಸಂಜೆ 5 ಗಂಟೆಗೆ ಕುಂಪಲದ ಎಮ್.ಆರ್. ಪ್ಯಾಲೆಸ್‍ನಲ್ಲಿ ಬಡ ಕುಟುಂಬದ ಹೆಣ್ಣಿನ ಮದುವೆಗೆ ಚಿನ್ನ ವಿತರಣೆ ಕಾರ್ಯಕ್ರಮ ಹಾಗೂ ಪ್ರಾರ್ಥನಾ ಸಂಗಮ ನಡೆಯಲಿದೆ.

ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಲಿರುವರು.
ಉಜಿರೆ ಮಲ್ಜಾ  ಸಂಸ್ಥೆಯ ಸಾರಥಿ ಸೈಯದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ನೇತೃತ್ವ ನೀಡುವರು. ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಕಾಮಿಲ್ ಸಖಾಫಿ ಉಳ್ಳಾಲ, ಮುಹಮ್ಮದ್ ತ್ವಾಹ ಮಂಗಳೂರು, ರಶೀದ್ ಹಾಜಿ ಪಾಂಡೇಶ್ವರ, ಬಶೀರ್ ಅಹ್ಸನಿ ತೋಡಾರ್, ಉಮರಬ್ಬ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸಮಿತಿ ಅಧ್ಯಕ್ಷ ಅಲ್ತಾಫ್ ಕುಂಪಲ ಭಾಗವಹಿಸಲಿರುವರು ಎಂದು ಸೆಕ್ಟರ್ ಮಾಧ್ಯಮ ಕಾರ್ಯದರ್ಶಿ ಬಿ.ಎಸ್. ಇಸ್ಮಾಈಲ್ ಕುತ್ತಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News