ಅ.18: ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ದೀಪಾವಳಿ ಸಂಭ್ರಮ
Update: 2017-10-15 15:43 GMT
ಮಂಗಳೂರು, ಅ.15: ಬೆಂಗಳೂರಿನ ಆರ್.ಟಿ.ನಗರದ ಅಂತಾರಾಷ್ಟ್ರೀಯ ವಾಸ್ತುತಜ್ಞರು, ವೈಜ್ಞಾನಿಕ ಜ್ಯೋತಿಷಿ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ತಮ್ಮ ಹುಟ್ಟೂರಾದ ಮುಲ್ಕಿಯಲ್ಲಿ ವರ್ಷಂಪ್ರತಿ ನಡೆಸುವ ಶ್ರಮಿಕರ ಶ್ರೇಯಸ್ಸಿಗೆ ದೀಪಾವಳಿಯ ಸಂಭ್ರಮವನ್ನು ಅ.18ರಂದು ಮುಲ್ಕಿ ಗೇರುಕಟ್ಟೆಯ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಸೇವಾಶ್ರಮದಲ್ಲಿ ನಡೆಸಲು ಅವರ ಭಕ್ತವೃಂದ ನಿರ್ಧರಿಸಿದೆ.
ಮುಲ್ಕಿ ಹೋಬಳಿಯ ವಿವಿಧ ವಾಹನಗಳ ಚಾಲಕ ವರ್ಗದ ಸುಮಾರು 2,000 ಮಂದಿ ಶ್ರಮಿಕರಿಗೆ ದೀಪಾವಳಿಯ ವಿಶೇಷ ಉಡುಗೊರೆ, ಪಡಿತರ ಸಾಮಗ್ರಿಗಳ ವಿತರಣೆ, ವಿಶೇಷ ವಸ್ತ್ರದಾನ, ದೀಪಾವಳಿ ಸಿಹಿ ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಸಾಧಕ ಶ್ರಮಿಕರಿಗೆ ಗೌರವಾರ್ಪಣಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸ್ವಾಮೀಜಿ, ಅವರ ಭಕ್ತರು, ಅಭಿಮಾನಿಗಳು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಪ್ರಕಟನೆ ತಿಳಿಸಿದೆ.