ಅಕ್ರಮ ಸಂಬಂಧದ ಆರೋಪಕ್ಕೆ ಈ ಸಾಧು ಮಾಡಿದ್ದೇನು ಗೊತ್ತೇ?
Update: 2017-10-18 04:14 GMT
ಜೈಪುರ, ಅ. 18: ಮಹಿಳೆಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ ಆರೋಪ ಎದುರಿಸುತ್ತಿದ್ದ 32 ವರ್ಷದ ಸಾಧುವೊಬ್ಬ ತನ್ನ ಶಿಶ್ನವನ್ನೇ ಕತ್ತರಿಸಿಕೊಂಡ ಅಪರೂಪದ ಘಟನೆ ರಾಜಸ್ಥಾನದ ಚುರು ಜಿಲ್ಲೆಯಿಂದ ವರದಿಯಾಗಿದೆ.
ಮಂಗಳವಾರ ಮುಂಜಾನೆ ತಾರನಗರದ ತಮ್ಮ ಆಶ್ರಮದಲ್ಲಿ ವಾಸವಿದ್ದ ಸಂತೋಷ್ ದಾಸ್ ಎಂಬ ಸ್ವಯಂಘೋಷಿತ ಸಾಧು ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಾಧುವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈತನ ಆರೋಗ್ಯ ಸ್ಥಿತಿ ತೀವ್ರ ಹದಗೆಡುತ್ತಿದ್ದು, ಬಿಕನೇರ್ ಆಸ್ಪತ್ರೆಗೆ ಒಯ್ಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಈ ಘಟನೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಆತನ ಹೇಳಿಕೆ ದಾಖಲಿಸಿಕೊಂಡ ಬಳಿಕ ಅದು ಸ್ಪಷ್ಟವಾಗಲಿದೆ ಎಂದು ಠಾಣಾಧಿಕಾರಿ ರಾಮಚಂದ್ರ ಸ್ಪಷ್ಟಪಡಿಸಿದ್ದಾರೆ.