ಉಗ್ರರ ಹತ್ಯೆಗೆ ಪ್ರತೀಕಾರ: ಶಾಲಾ ಶಿಕ್ಷಕನ ಗಂಟಲು ಸೀಳಿ ಕೊಲೆ

Update: 2017-10-18 13:57 GMT

.ಶ್ರೀನಗರ, ಅ.18: ಮೂವರು ಉಗ್ರರನ್ನು ಎನ್ ಕೌಂಟರ್ ನಲ್ಲಿ ಕೊಲೆಗೈದಿರುವುದಕ್ಕೆ ಪ್ರತಿಕಾರವಾಗಿ ಶಾಲಾ ಶಿಕ್ಷಕರೊಬ್ಬರನ್ನು ಚಾಕುವಿನಿಂದ ಗಂಟಲು ಸೀಳಿ ಕೊಲೆಗೈದಿರುವ ಘಟನೆ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.

ವಾಥೋ  ಗ್ರಾಮದ ಶಿಕ್ಷಕ ಇಜಾಝ್ ಅಹ್ಮದ್ ಅವರ ಮೃತದೇಹ ಮನೆಯಿಂದ ಒಂದು ಕಿಲೋ ಮೀಟರ್ ದೂರದ ಹೊಲದಲ್ಲಿ ಬುಧವಾರ ಪತ್ತೆಯಾಗಿದೆ.

ಮೃತದೇಹದ ಪಕ್ಕದಲ್ಲಿ  ಸಿಕ್ಕಿರುವ ಚೀಟಿಯಲ್ಲಿ   “ ಗ್ಯಾಟಿಪೊರಾದಲ್ಲಿ ಮೂವರು ಉಗ್ರರ ಹತ್ಯೆಗೆ ಪ್ರತಿಕಾರವಾಗಿ ಕೊಂದಿರುವುದಾಗಿ’’ ಬರೆಯಲಾಗಿದೆ.

ಈ ರೀತಿ ಬರೆದವರು ಯಾರೆಂದು ಗೊತ್ತಿಲ್ಲ. ತನಿಖೆ ಮುಂದುವರಿದಿದೆ ಎಂದು ಶೋಪಿಯಾನ ಪೊಲೀಸ್ ಅಧೀಕ್ಷಕರಾದ ಶ್ರೀರಾಮ್ ದಿನಕರ್ ಅಂಬ್ರಾಕರ್ ತಿಳಿಸಿದ್ದಾರೆ.

ಅ.10ರಂದು ಶಿಕ್ಷಕ ಅಹ್ಮದ್ ಅವರ ಮನೆಯ ಪಕ್ಕದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆದ ನಡೆಸಿದ ಎನ್ ಕೌಂಟರ್ ನಲ್ಲಿ ಹಿಝ್ಬುಲ್ ಮುಜಾಹಿದಿನ್ ಗೆ  ಸೇರಿದರೆನ್ನಲಾದ ಮೂವರು ಉಗ್ರರನ್ನು ಕೊಲ್ಲಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News