ವೃದ್ಧನೊಂದಿಗೆ ಉಗುಳಲು ಹೇಳಿ ಅದನ್ನೇ ನೆಕ್ಕಲು ಹೇಳಿದರು!

Update: 2017-10-19 16:46 GMT

ಬಿಹಾರ, ಅ.19: ಬಾಗಿಲು ಬಡಿಯದೆ ಗ್ರಾಮದ ಮುಖ್ಯಸ್ಥನ ಮನೆಯೊಳಕ್ಕೆ ನುಗ್ಗಿದ ಕಾರಣಕ್ಕಾಗಿ ವೃದ್ಧರೋರ್ವರಿಗೆ ಉಗುಳಲು ಹೇಳಿ ಅದನ್ನೇ ನೆಕ್ಕಲು ಬಲವಂತಪಡಿಸಿದ ಅಮಾನವೀಯ ಘಟನೆ ಬಿಹಾರದ ನಳಂದಾದ ನೂರ್ ಸರಾಯ್ ಬ್ಲಾಕ್ ನ ಅಜಯ್ ಪುರ ಗ್ರಾಮದಲ್ಲಿ ನಡೆದಿದೆ.

ಸರಕಾರಿ ಯೋಜನೆಯೊಂದನ್ನು ದೊರಕಿಸಿಕೊಡುವ ಸಲುವಾಗಿ ವೃದ್ಧ ವ್ಯಕ್ತಿಯೊಬ್ಬರು ಗ್ರಾಮದ ಮುಖ್ಯಸ್ಥನ ಮನೆಗೆ ತೆರಳಿದ್ದರು. ಮನೆಯೊಳಕ್ಕೆ ಪ್ರವೇಶಿಸುವಾಗ ಬಾಗಿಲು ಬಡಿದಿಲ್ಲ ಎಂಬ ಕಾರಣಕ್ಕಾಗಿ ಅವರೊಂದಿಗೆ ಉಗುಳಲು ಹೇಳಿ ಅದನ್ನೇ ನೆಕ್ಕಲು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ಸರಕಾರದ ಸಚಿವ ನಂದಕಿಶೋರ್ ಯಾದವ್, “ಇಂತಹ ಘಟನೆಗಳನ್ನು ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News