ಕಾಪು : ವಿದ್ಯುತ್ ಗುತ್ತಿಗೆದಾರರೊಂದಿಗೆ ಸ್ನೇಹಕೂಟ

Update: 2017-10-20 11:21 GMT

ಕಾಪು, ಅ.20: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಕಾಪು ಉಪ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ವಿದ್ಯುತ್ ಗುತ್ತಿಗೆದಾರ ರೊಂದಿಗೆ ಸ್ನೇಹಕೂಟ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಜಮಾಅತೆ ಇಸ್ಲಾಮೀ ಹಿಂದ್‌ನ ಮಂಗಳೂರು ವಲಯ ಸಂಚಾಲಕ ಅಕ್ಬರ್ ಅಲಿ ಮಾತನಾಡಿ, ವಿದ್ಯುತ್ ಗುತ್ತಿಗೆದಾರರು ಒತ್ತಡಕ್ಕೆ ಮಣಿಯದೆ ನಗುಮುಖದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ತಮಗೆ ಬರುವ ದೂರನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದರೆ ಗ್ರಾಹಕರಿಗೆ ತೃಪ್ತಿ ದೊರೆ ಯುತ್ತದೆ. ಇದು ಕೂಡ ಜನಸೇವೆಯಾಗಿದೆ. ಇದರಿಂದ ಮಾನವೀಯ ಸಂಬಂಧವನ್ನು ಬೆಳೆಸಿಕೊಳ್ಳಬಹುದು ಎಂದರು.

ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ರಾವ್ ಎಂ., ಕಾರ್ಯದರ್ಶಿ ಆಲ್ಫೋನ್ಸ್ ಕೆ.ಆಳ್ವ ಉಪಸ್ಥಿತರಿದ್ದರು. ಕಾಪು ವೃತ್ತದ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದಿನೇಶ್ ಆರ್.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News