ಆಳ್ವಾಸ್ ವಿದ್ಯಾರ್ಥಿಸಿರಿ: ಹೊಸ ಪುಸ್ತಕ ಬಿಡುಗಡೆಗೆ ಆಹ್ವಾನ

Update: 2017-10-27 04:42 GMT

ಮೂಡುಬಿದಿರೆ, ಅ.27: ಆಳ್ವಾಸ್ ನುಡಿಸಿರಿ-2017 ಪ್ರಯುಕ್ತ ನವೆಂಬರ್ 30ರಂದು ನಡೆಯುವ ‘ಆಳ್ವಾಸ್ ವಿದ್ಯಾರ್ಥಿಸಿರಿ’ ಸಮ್ಮೇಳನದಲ್ಲಿ ಹೊಸಪುಸ್ತಕ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಬರೆದ ಕನ್ನಡ ಸೃಜನಶೀಲ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳು ಬಿಡುಗಡೆಗೆ ಅರ್ಹವಾಗುತ್ತವೆ.

ಕೃತಿಯು ಮೊದಲನೆಯ ಪ್ರಕಟನೆಯಾಗಿರಬೇಕು, ಮರುಪ್ರಕಟನೆಗೆ ಅವಕಾಶವಿಲ್ಲ. ಕನಿಷ್ಠ 80 ಪುಟಗಳನ್ನು ಹೊಂದಿದ್ದು ವೌಲಿಕ ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಕೃತಿಗೆ ರೂ.5,000 ಗೌರವಧನ ನೀಡಲಾಗುತ್ತದೆ.

ಆಯ್ಕೆಯ ಜವಾಬ್ದಾರಿ ಸಂಪೂರ್ಣ ಆಯ್ಕೆ ಸಮಿತಿಯದ್ದಾಗಿದ್ದು, ಈ ಸಂಬಂಧ ಯಾವುದೇ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಆಸಕ್ತರು ನವೆಂಬರ್ 5ರೊಳಗೆ ಮೊ.ಸಂ. 9481326858 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News