ನಂತೂರು ಬಳಿ ಬೀದಿದೀಪ ಸರಿಪಡಿಸಿ

Update: 2017-11-05 18:28 GMT

ಮಾನ್ಯರೆ,

ಸದ್ಯ ಮಂಗಳೂರಿನ ರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ. ನಂತೂರು ಬಳಿಯೂ ರಸ್ತೆ ಅಗಲೀಕರಣ ನಡೆದಿದ್ದು ಅಗಲ ರಸ್ತೆಗಳಿಂದಾಗಿ ವಾಹನ ಸಂಚಾರ ಸುಗಮವಾಗಿದೆ.

ಆದರೆ ನಂತೂರಿನಿಂದ ಕೆಪಿಟಿಗೆ ಹೋಗುವ ಕಡೆ ಕೆಲವು ಬೀದಿದೀಪಗಳು ಉರಿಯುತ್ತಿಲ್ಲ. ಇದರಿಂದ ಈ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಚಲಿಸಲು ಕಷ್ಟವಾಗುತ್ತಿದೆ. ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವಾಗ ರಸ್ತೆ ವಿಭಜಕಗಳ ಮಧ್ಯೆ ಬೀದಿದೀಪಗಳನ್ನು ಅಳವಡಿಸಲಾಗುತ್ತದೆ. ನಂತೂರಿನಲ್ಲಿಯೂ ಅಳವಡಿಸಲಾಗಿದೆ ಆದರೆ ಅದು ಉರಿಯದೆ ಇರುವುದರಿಂದ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಮನವಿ.

Writer - - ಶಶಿಕಾಂತ, ಕೆಪಿಟಿ

contributor

Editor - - ಶಶಿಕಾಂತ, ಕೆಪಿಟಿ

contributor

Similar News