ಟ್ವೆಂಟಿ-20 ಟ್ರೋಫಿಯನ್ನು ಸಿರಾಜ್ ಕೈಗೆ ಕೊಟ್ಟ ಕೊಹ್ಲಿ

Update: 2017-11-09 15:39 GMT

ತಿರುವನಂತಪುರ, ನ.9: ನ್ಯೂಝಿಲೆಂಡ್ ವಿರುದ್ಧದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 6 ರನ್‌ಗಳ ಜಯ ಗಳಿಸಿ, ಸರಣಿಯನ್ನು ತನ್ನದಾಗಿಸಿತ್ತು. ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ 68 ರನ್ ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ನಿಗದಿತ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 61 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು. 

ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ಗೆಲುವು ಸಾಧಿಸುವಲ್ಲಿ ಹೈದರಾಬಾದ್‌ನ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮಹತ್ವದ ಪಾತ್ರವಹಿಸಿಲ್ಲ. ಆದರೆ, ಚೊಚ್ಚಲ ಪಂದ್ಯದಲ್ಲಿ ಸಿರಾಜ್ ಪ್ರಯತ್ನವನ್ನು ನಾಯಕ ವಿರಾಟ್ ಕೊಹ್ಲಿ ಗುರುತಿಸಲು ಮರೆಯಲಿಲ್ಲ.

ಮಂಗಳವಾರ ನಡೆದಿದ್ದ ಮೂರನೆ ಹಾಗೂ ಅಂತಿಮ ಪಂದ್ಯ ಬಳಿಕ ನಡೆದ ಟ್ರೋಫಿ ವಿತರಣಾ ಕಾರ್ಯಕ್ರಮದಲ್ಲಿ ಕೊಹ್ಲಿ ಟ್ವೆಂಟಿ-20 ಟ್ರೋಫಿಯನ್ನು ಸ್ವೀಕರಿಸಿದ ತಕ್ಷಣ ಸಿರಾಜ್ ಕೈಗೆ ಕೊಟ್ಟರು. ಈ ಮೂಲಕ ತನ್ನ ವಿಶಾಲ ಹೃದಯವನ್ನು ತೆರೆದಿಟ್ಟರು. ಕೊಹ್ಲಿಯವರ ಈ ಕಾರ್ಯಕ್ಕೆ ಟ್ವಿಟರಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News