ಬಿಜೆಪಿ ಸೇರುವ ವದಂತಿಯನ್ನು ಪ್ರಮೋದ್ ತೇಜೋವಧೆಗೆ ಬಿಜೆಪಿಗರು ಹುಟ್ಟುಹಾಕಿದ್ದಾರೆ: ಸಿಎಂ

Update: 2017-11-19 12:02 GMT

ಮಂಗಳೂರು, ನ.19: ಬಿಜೆಪಿಗೆ ಸೇರಲಿದ್ದಾರೆಂಬ ವದಂತಿಯನ್ನು ಪ್ರಮೋದ್ ಮಧ್ವರಾಜ್ ಅವರ ತೇಜೋವಧೆ ಮಾಡಲು ಬಿಜೆಪಿಯವರು ಹುಟ್ಟುಹಾಕಿದ್ದಾರೆ. ಪ್ರಮೋದ್ ರ ಇಮೇಜ್ ಹಾಳುಮಾಡಲು ಬಿಜೆಪಿಯವರು ನಡೆಸುತ್ತಿರುವ ಪ್ರಯತ್ನವಿದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳೂರು‌ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿಯ ಬಗ್ಗೆ ಈಗಾಗಲೇ ಪ್ರಮೋದ್ 3 ಬಾರಿ ಸ್ಪಷ್ಟೀಕರಣ ನೀಡಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಸಚಿವ ಪ್ರಮೋದ್ ಮಧ್ವರಾಜ್ ಧ್ವನಿಗೂಡಿಸಿದರು. 

"ನನ್ನ ಜೊತೆ ಬೇಕಾದಷ್ಟು ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ. ಅದನ್ನೆಲ್ಲಾ ನಾನು ಹೇಳಕ್ಕಾಗುತ್ತಾ?, ಬಹಳಷ್ಟು ಜನ ಆರೆಸ್ಸೆಸ್ ನವರೂ ಸಂಪರ್ಕದಲ್ಲಿದ್ದಾರೆ" ಎಂದು ಸಿಎಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News