ಮೋದಿ ‘ಬ್ರಹ್ಮ’ನಿದ್ದಂತೆ, ಅಧಿವೇಶನ ಆರಂಭದ ದಿನಾಂಕ ಅವರಿಗೆ ಮಾತ್ರ ಗೊತ್ತು

Update: 2017-11-21 14:58 GMT

ಹೊಸದಿಲ್ಲಿ,ನ.21: ನರೇಂದ್ರ ಮೋದಿ ಅವರು ಎಲ್ಲವನ್ನೂ ನಿಯಂತ್ರಿಸುವ ಸೃಷ್ಟಿಕರ್ತ ‘ಬ್ರಹ್ಮ’ನಿದ್ದಂತೆ ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನ ಯಾವಾಗ ಆರಂಭವಾಗುತ್ತದೆ ಎನ್ನುವುದು ಅವರಿಗೆ ಮಾತ್ರ ಗೊತ್ತು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಧಿವೇಶನವನ್ನು ಕರೆಯುವಲ್ಲಿ ವಿಳಂಬಕ್ಕಾಗಿ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಟೀಕಿಸಿದರು.

 ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮೋದಿ ಸರಕಾರದಡಿ ಪ್ರಜಾಪ್ರಭುತ್ವಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಆಪಾದಿಸಿದ ಅವರು, ಸಂಸತ್ ಅಧಿವೇಶನದ ದಿನಾಂಕಗಳ ಬಗ್ಗೆ ಸಚಿವರು, ಸ್ಪೀಕರ್, ಲೋಕಸಭೆಯ ಮಹಾ ಕಾರ್ಯದರ್ಶಿ ಸೇರಿದಂತೆ ಯಾರಿಗೂ ಗೊತ್ತಿಲ್ಲ. ಅವರು ಬ್ರಹ್ಮನೆಂದು ಕರೆಯುವ ಓರ್ವ ವ್ಯಕ್ತಿಗೆ ಮಾತ್ರ ಅದು ಗೊತ್ತಿದೆ. ಬ್ರಹ್ಮ ಆದೇಶಿಸುವವರೆಗೆ ನಮಗೆ ದಿನಾಂಕ ಗೊತ್ತಾಗುವುದಿಲ್ಲ ಎಂದರು.

ತನಗೆ ಅನಾನುಕೂಲವಾಗಿರುವ ವಿಷಯಗಳ ಬಗ್ಗೆ ಟೀಕೆಗಳಿಂದ ತಪ್ಪಿಸಿಕೊಳ್ಳಲು ಸರಕಾರವು ಚಳಿಗಾಲದ ಅಧಿವೇಶನವನ್ನು ಕರೆಯುತ್ತಿಲ್ಲ ಎಂದು ಖರ್ಗೆ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News