‘ಧರ್ಮ ಸಂಸದ್’ನಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಚರ್ಚೆ: ತೊಗಾಡಿಯಾ

Update: 2017-11-23 07:58 GMT

ಮಂಗಳೂರು, ನ.23: ಉಡುಪಿಯಲ್ಲಿ ನಡೆಯಲಿರುವ ‘ಧರ್ಮ ಸಂಸದ್’ನಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಚರ್ಚೆಯಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ ವತಿಯಿಂದ ಉಡುಪಿಯಲ್ಲಿ ನ.24ರಿಂದ 3 ದಿನಗಳ ಕಾಲ ನಡೆಯಲಿರುವ ‘ಧರ್ಮ ಸಂಸದ್’ನಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಅಸ್ಪಶ್ಯತೆ, ಗೋ ರಕ್ಷಣೆ, ಗೋ ರಕ್ಷಣೆ ಕುರಿತ ಕಾನೂನು ಬಗ್ಗೆ ಚರ್ಚೆಯಾಗಲಿದೆ. ಕುರಿತು ಧರ್ಮಸಂಸತ್ತಿನಲ್ಲೇ ವಿಚಾರ ಮಂಡನೆಯಾಗಲಿದೆ. ರೈತರಿಗೆ ಪೂರಕ ಯೋಜನೆ ಕುರಿತ ವಿಷಯವೂ ಚರ್ಚೆ ನಡೆಯಲಿದೆ. ಧರ್ಮ ಸಂಸತ್ತಿನಲ್ಲೇ ಈ ಬಗ್ಗೆ ತಿಳಿಸಲಾಗುವುದು ಎಂದರು.

‘ಪದ್ಮಾವತಿ’ ಸಿನಿಮಾ ವಿವಾದದ ಕುರಿತಂತೆ ಮಾಧ್ಯಮದವರು ಪ್ರಶ್ನಿಸಿದಾಗ ‘ಪದ್ಮಾವತಿ’ ಚಿತ್ರ ಬ್ಯಾನ್ ಆಗಬೇಕಿದೆ ಎಂದು ತೊಗಾಡಿಯಾ ಪ್ರತಿಕ್ರಿಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News