ವರದಕ್ಷಿಣೆ ಕಿರುಕುಳ: ಪತಿ, ಅತ್ತೆ ಸಹಿತ ನಾಲ್ವರ ವಿರುದ್ಧ ದೂರು

Update: 2017-11-23 16:11 GMT

ಮೂಡುಬಿದಿರೆ, ನ. 23: ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪತ್ನಿಯು ತನ್ನ ಪತಿ, ಅತ್ತೆ, ಮಾವ ಸಹಿತ ನಾಲ್ವರ ಮೇಲೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸುಳ್ಯ ಕಾಯರ್‌ತೋಡಿಯ ಭರತ್ ಗೌಡ, ಆತನ ತಂದೆ ಉಮೇಶ್, ತಾಯಿ ನಳಿನಿ ಮತ್ತು ಈಕೆಯ ಸಹೋದರ ಕರುಣಾಕರ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಂಟೆಕ್ ಪದವೀಧರೆ ಹಾಗೂ ವೃತ್ತಿಯಲ್ಲಿ ಉಪನ್ಯಾಸಕಿಯಾಗಿರುವ ತೋಡಾರಿನ ತೇಜಸ್ವಿನಿ (25)ಎಂಬವರ ವಿವಾಹ ಸುಳ್ಯ ಕಾಯರ್‌ತೋಡಿಯ ಭರತ್ ಜತೆ 2014ರಲ್ಲಿ ಸುಳ್ಯದಲ್ಲಿ ನೆರವೇರಿತ್ತು. ಭರತ್ ಕೂಡ ಸುಳ್ಯದ ಕಾಲೇಜೊಂದರಲ್ಲಿ ಉಪನ್ಯಾಸಕರು ಎನ್ನಲಾಗಿದೆ.

 ಮದುವೆ ಸಂದರ್ಭ ತೇಜಸ್ವಿನಿಗೆ ತವರು ಮನೆಯವರು 75 ಪವನ್ ಬಂಗಾರ ಮತ್ತು 10 ಲಕ್ಷ ರೂ. ಮದುವೆಗೆ ಖರ್ಚು ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಇತ್ತೀಚೆಗೆ ಪತಿ ಭರತ್ ಹೆಚ್ಚುವರಿ 10 ಲಕ್ಷ ರೂ. ವರದಕ್ಷಿಣೆ ತರುವಂತೆ ಪೀಡಿಸಿ ಆತನ ತಂದೆ, ತಾಯಿ ಹಾಗೂ ಮಾವನ ಜತೆ ಸೇರಿಕೊಂಡು ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News