ಗಾಂಜಾ ಮಾರಾಟಕ್ಕೆ ಯತ್ನ: ಓರ್ವನ ಬಂಧನ

Update: 2017-11-23 16:44 GMT

ಮೂಡುಬಿದಿರೆ, ನ. 23: ತಾಲೂಕಿನ ತೆಂಕ ಉಳೆಪಾಡಿ ಗ್ರಾಮದ ಗಂಜಿಮಠ ಮಳಲಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಇಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಓಡಿಸ್ಸಾ ರಾಜ್ಯದ ಗಂಜಮ್ ಮಾರ್ಡಕೋಟೆಯ ಕಿಶೋರ್‌ಚಂದ್ರ ಸಮಲ್ (47) ಬಂಧಿತ ಆರೋಪಿ. ಈತನಿಂದ 30 ಸಾವಿರ ರೂ. ಮೌಲ್ಯದ 2.20 ಕೆ.ಜಿ. ಗಾಂಜಾ ಮತ್ತು ಒಂದು ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಒಡಿಸ್ಸಾದಿಂದ ವಾರಕ್ಕೊಮ್ಮೆ ಗಾಂಜಾ ತಂದು ಇಲ್ಲಿ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್, ಉಪ ನಿರೀಕ್ಷಕಿ ಲತಾ ಕೆ.ಎನ್. ಮತ್ತು ಸಿಬ್ಬಂದಿಗಳಾದ ಜಗದೀಶ್, ಶಾಜು ನಾಯರ್, ಜಾಯ್ಸ, ಕಿಶೋರ್ ಪೂಜಾರಿ ಮತ್ತು ಭಾಸ್ಕರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News